Advertisement
ಘಟನೆ ಗದಗ ಜಿಲ್ಲೆ ರೋಣ ಗ್ರಾಮದ ಸವಡಿ ಎಂಬಲ್ಲಿ ಬುಧವಾರ ಬೆಳಗ್ಗೆ ಮಾಲೀಕ ಮತ್ತು ಮೇಸ್ತ್ರಿ ಕೊಳವೆ ಬಾವಿಯೊಳಕ್ಕೆ ಬಿದ್ದಿದ್ದರು. 4 ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಲೀಕ ಶಂಕ್ರಪ್ಪ 8 ವರ್ಷಗಳ ಹಿಂದೆ ಮಂಜುಳಾ ಎಂಬಾಕೆ ಜೊತೆ ವಿವಾಹವಾಗಿದ್ದು, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. 7 ವರ್ಷದ ಸಂಗಮೇಶ್, 5 ವರ್ಷದ ಸಂಗೀತಾ, 3 ವರ್ಷದ ಸ್ವಪ್ನಾ.
ಬಸವರಾಜ್ ಗೆ 9 ವರ್ಷದ ಹಿಂದೆ ರೇಖಾ ಜೊತೆ ವಿವಾಹವಾಗಿದೆ. ಬಸವರಾಜ್ ಗೆ ಓರ್ವ ಪುತ್ರಿ, ಇಬ್ಬರು ಪುತ್ರರಿದ್ದಾರೆ.
2ಲಕ್ಷ ಪರಿಹಾರ ಘೋಷಣೆ:ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ಶಂಕ್ರಪ್ಪ ಬಾಣದ್ ಹಾಗೂ ಬಸವರಾಜ್ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.