Advertisement

ಕೊಳವೆ ಬಾವಿಗೆ ಬಿದ್ದ ಮಾಲೀಕ, ಮೇಸ್ತ್ರಿ ಸಾವು; ಇಬ್ಬರ ಮೃತದೇಹ ಪತ್ತೆ

12:05 PM Apr 12, 2017 | Team Udayavani |

ಗದಗ: ರೀ ಬೋರ್ ಮಾಡುವಾಗ 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಮಾಲೀಕ ಮತ್ತು ಮೇಸ್ತ್ರಿ ಸಾವನ್ನಪ್ಪಿದ್ದು, ಇಬ್ಬರ ಮೃತದೇಹವನ್ನು ರಕ್ಷಣಾ ಸಿಬ್ಬಂದಿಗಳು ಹೊರತೆಗೆದಿದ್ದಾರೆ.

Advertisement

ಘಟನೆ ಗದಗ ಜಿಲ್ಲೆ ರೋಣ ಗ್ರಾಮದ ಸವಡಿ ಎಂಬಲ್ಲಿ ಬುಧವಾರ ಬೆಳಗ್ಗೆ ಮಾಲೀಕ ಮತ್ತು ಮೇಸ್ತ್ರಿ ಕೊಳವೆ ಬಾವಿಯೊಳಕ್ಕೆ ಬಿದ್ದಿದ್ದರು.  4 ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕ್ರಪ್ಪ ಬಾಣದ್ ಗೆ ಸೇರಿದ ಜಮೀನಿನಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿತ್ತು. ಹೀಗಾಗಿ ಕೊಳವೆ ಬಾವಿಯಿಂದ ಕೇಸಿಂಗ್ ಪೈಪ್ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು 40 ಅಡಿ ಆಳದಲ್ಲಿ ಸಿಲುಕಿರುವ ಘಟನೆ ನಡೆದಿತ್ತು.

ಮಾಲೀಕ ಶಂಕ್ರಪ್ಪ (40ವರ್ಷ) ಹಾಗೂ ಮೇಸ್ತ್ರಿ ಬಸವರಾಜ್(33)ಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಸುದ್ದಿ ತಿಳಿದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮೀನಿನಲ್ಲಿ ಜಮಾವಣೆಗೊಂಡಿದ್ದರು.

ಮುಗಿಲು ಮುಟ್ಟಿದ್ದ ಆಕ್ರಂದನ:

Advertisement

ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಲೀಕ ಶಂಕ್ರಪ್ಪ 8 ವರ್ಷಗಳ ಹಿಂದೆ ಮಂಜುಳಾ ಎಂಬಾಕೆ ಜೊತೆ ವಿವಾಹವಾಗಿದ್ದು,  ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. 7 ವರ್ಷದ ಸಂಗಮೇಶ್, 5 ವರ್ಷದ ಸಂಗೀತಾ, 3 ವರ್ಷದ ಸ್ವಪ್ನಾ.

ಬಸವರಾಜ್ ಗೆ 9 ವರ್ಷದ ಹಿಂದೆ ರೇಖಾ ಜೊತೆ ವಿವಾಹವಾಗಿದೆ. ಬಸವರಾಜ್ ಗೆ ಓರ್ವ ಪುತ್ರಿ, ಇಬ್ಬರು ಪುತ್ರರಿದ್ದಾರೆ.

2ಲಕ್ಷ ಪರಿಹಾರ ಘೋಷಣೆ:
ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ಶಂಕ್ರಪ್ಪ ಬಾಣದ್ ಹಾಗೂ ಬಸವರಾಜ್ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next