Advertisement

ಗದಗ: ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆಯಾಚಿಸಲಿ‌-ರವಿಂದ್ರನಾಥ

05:23 PM Feb 15, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಬಹುಮತ ಬರುವುದಿಲ್ಲ ಎಂಬ ಕಾರಣಕ್ಕೆ ರಾಹುಲ್‌ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾತಿ ನಿಂದನೆ ಆರೋಪ ಮಾಡಿದ್ದು ಖಂಡನೀಯ. ರಾಹುಲ್‌ ಗಾಂಧಿ ಅವರು ದೇಶದ ಜನರ ಕ್ಷಮೆಯಾಚಿಸಬೇಕೆಂದು ರಾಜ್ಯ ಒಬಿಸಿ ಕಾರ್ಯದರ್ಶಿ ರವಿಂದ್ರನಾಥ ದಂಡಿನ ಆಗ್ರಹಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿಯವರು ಯಾರಿಗೂ ಅನ್ಯಾಯ ಮಾಡಿಲ್ಲ. ಅವರು ಯಾವುದೇ ಜಾತಿ, ಧರ್ಮ, ಬುಡಕಟ್ಟು ಜನಾಂಗವನ್ನಾಗಲಿ ನಿಂದಿಸಿ ರಾಜಕೀಯ ಮಾಡುವಂತ ವ್ಯಕ್ತಿಯಲ್ಲ. ಭಾರತದ 140 ಕೋಟಿ ಜನರ ಪ್ರತಿನಿ ಧಿಯಾಗಿ, ಪ್ರಧಾನ ಸೇವಕರಾಗಿ ಎಲ್ಲ ವರ್ಗದ ಜನರ ಸರ್ವತೋಮುಖ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಂದ ದೇಶ ಉದ್ಧಾರವಾಗಿದೆಯೇ ಹೊರತು ಹಾನಿಯಾಗಿಲ್ಲ. ಭಾರತ ವಿಶ್ವಗುರುವಾಗಿ, ಆರ್ಥಿಕವಾಗಿ ಐದನೇ ಶಕ್ತಿಯಾಗಿ ಜಗತ್ತಿನಲ್ಲಿ ಹೊರ ಹೊಮ್ಮಿದೆ. ಹೀಗಿದ್ದಾಗ್ಯೂ ಕಾಂಗ್ರೆಸ್‌ನವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

1994ರಲ್ಲಿ ಕಾಂಗ್ರೆಸ್‌ ಸರ್ಕಾರ ತೇಲಿ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದಾರೆ. ಈ ಬಗ್ಗೆ ಅಂದಿನ ಕಾಂಗ್ರೆಸ್‌ ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ನಂತರ 1999ರಲ್ಲಿ ತೇಲಿ ಸಮಾಜವನ್ನು ಕೇಂದ್ರ ಸರ್ಕಾರ ಓಬಿಸಿ ಪಟ್ಟಿಯಲ್ಲಿ ಸೇರಿಸಿದೆ. ತೇಲಿ ಸಮಾಜವೆಂದರೆ ಕರ್ನಾಟಕದಲ್ಲಿ ಹಿಂದುಳಿದ ಗಾಣಿಗ ಸಮಾಜ. ಪ್ರಸ್ತುತ ತೇಲಿ ಸಮಾಜವನ್ನು ರಾಹುಲ್‌ ಗಾಂಧಿ ಯವರು ಮೋದಿಯವರು ಹಿಂದುಳಿದ ಜಾತಿಯವರಲ್ಲ ತಾವೇ ಸೇರಿಸಿಕೊಂಡಿದ್ದಾರೆಂದು ಆರೋಪ ಮಾಡಿದ್ದು, ಅವರ ಸಂಕುಚಿತ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ವರ್ಗದವರನ್ನು ಒಗ್ಗೂಡಿಸಿಕೊಂಡು ದೇಶವನ್ನು ವಿಶ್ವಾದ್ಯಂತ ಕೊಂಡಾಡುವ ಹಾಗೆ ಮಾಡಿದ್ದಾರೆ. ಅಲ್ಲದೇ, ಹಿಂದುಳಿದ ವರ್ಗಗಳ ಆಯೋಗಕ್ಕೆ ಶಾಶ್ವತ ಸಂವಿಧಾನಿಕ ಸ್ಥಾನಮಾನ ಕೊಟ್ಟಿದ್ದಾರೆ. ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ರವಿಂದ್ರನಾಥ ದಂಡಿನ ಹೇಳಿದರು.

ಪ್ರಕಾಶ ಬಾಕಳೆ, ಒಬಿಸಿ ಜಿಲ್ಲಾಧ್ಯಕ್ಷ ಅಶೋಕ ಹೆಬ್ಬಳ್ಳಿ, ಗದಗ ಗ್ರಾಮೀಣ ಮಂಡಲದ ಒಬಿಸಿ ಮೋರ್ಚಾದ ಅಧ್ಯಕ್ಷ ರವಿ ವಗ್ಗನವರ, ಯುವ ಮುಖಂಡ ಸುರೇಶ ಹರಳಪ್ಪನವರ ಸೇರಿದಂತೆ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next