Advertisement

ಮನಗೂಳಿ ಜಮೀನಿನಲ್ಲಿ ಗಾಂಜಾ ಬೆಳೆದ ಇಬ್ಬರ ಬಂಧನ

12:14 AM Oct 01, 2020 | Hari Prasad |

ವಿಜಯಪುರ: ಜಿಲ್ಲೆಯಲ್ಲಿ ಪೊಲೀಸರು ನಡೆಸಿರುವ ಗಾಂಜಾ ವಿರೋಧಿ ಹೋರಾಟ ಮುಂದುವರೆದಿದೆ.

Advertisement

ಮನಗೂಳಿ ಗ್ರಾಮದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಸವನಬಾಗೇವಾಡಿ ಡಿಎಸ್ಪಿ ಶಾಂತವೀರ ನೇತೃತ್ವದಲ್ಲಿ ಮನಗೂಳಿ ಎಸೈ ಎನ್.ಬಿ.ಶಿವೂರ ಅವರ ತಂಡ ಮನಗೂಳಿ ಗ್ರಾಮದ ಹೊಲಗಳಲ್ಲಿ ಶಂಕ್ರಪ್ಪ ಬಸಪ್ಪ ಕಾಳಗಿ ಇವರು ಜಮೀನಿನಲ್ಲಿ ಬೆಳೆದಿದ್ದ 15 ಕೆಜಿ ಗಾಂಜಾ ಹಾಗೂ ಸಂಗಮೇಶ ಮಹದೇವ ಕಾಳಗಿ ಇವರು ಜಮೀನಿನಲ್ಲಿ ಬೆಳೆದಿದ್ದ 5 ಕೆಜಿ‌ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮನಗೂಳಿ ಪೊಲೀಸರು ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next