Advertisement

ಬಿಎಸ್ ವೈ ರಾಜೀನಾಮೆ ಹಿಂದಿನ ಮರ್ಮ ಬಿಜೆಪಿ ಹೈಕಮಾಂಡ್ ಬಹಿರಂಗಪಡಿಸಲಿ : ಪರಮೇಶ್ವರ್

11:25 AM Jul 27, 2021 | Team Udayavani |

ಬೆಂಗಳೂರು : ಯಾವ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರು ರಾಜಿನಾಮೆಯನ್ನು ನೀಡಿದ್ದಾರೆ ಎಂಬುದನ್ನು ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಲಿ ಎಂದು ಬಿಜೆಪಿ ಹೈಕಮಾಂಡ್ ಗೆ ಮಾಜಿ ಡಿಸಿಎಂ ಪರಮೇಶ್ವರ್ ಒತ್ತಾಯಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್ ರವಿವಾರದಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಏಕಾಏಕಿ ರಾಜಿನಾಮೆಯನ್ನು ನೀಡಿರುವ ಉದ್ದೇಶ ಏನಿತ್ತು, ಅವರು ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಬಿಜೆಪಿ ಹೈಕಮಾಂಡ್ ರಾಜ್ಯದ ಜನತೆಗೆ ತಿಳಿಸಬೇಕು ಎಂದರು.

ಈಗಾಗಲೇ ಬಿಜೆಪಿ ಪಕ್ಷದವರೇ ಹೇಳಿರುವಂತೆ ಬಿಎಸ್ ವೈ ಅವರ ಮಗ ಮತ್ತು ಕುಟುಂಬದವರಿಂದಲೇ ರಾಜೀನಾಮೆ ಪಡೆಯುವಂತಾಯಿತು ಎಂಬಿತ್ಯಾದಿ ವಿಚಾರಗಳು ಅವರ ಪಕ್ಷದವರೇ ಹೇಳಿದ್ದಾರೆ ಹಾಗಾಗಿ ಯಾವ ಉದ್ದೇಶಕ್ಕೆ ರಾಜೀನಾಮೆ ನೀಡಿದ್ದಾರೆ, ಅಲ್ಲದೆ ಇದರ ಹಿಂದಿನ ಮರ್ಮ ಏನು ಎಂಬುದನ್ನು ಹೈಕಮಾಂಡ್ ತಿಳಿಸಲಿ ಎಂದರು.

ಇದನ್ನೂ ಓದಿ :ಭಾರಿ ಮಳೆ, ಗುಡ್ಡ ಕುಸಿತ : ಚಂಡೀಗಡ-ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್

Advertisement

Udayavani is now on Telegram. Click here to join our channel and stay updated with the latest news.

Next