Advertisement

ಜಿ.ಡಿ.ಹರೀಶ್ ಗೌಡರಿಗೆ ಅಭಿಮಾನಿಗಳಿಂದ ಚುನಾವಣೆ ಖರ್ಚಿಗೆ 10ಲಕ್ಷ ರೂ. ನೆರವು

10:55 PM Feb 15, 2023 | Team Udayavani |

ಹುಣಸೂರು: ತಾಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಜೆಡಿಎಸ್ ಮುಖಂಡರು ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಬನ್ನಿಕುಪ್ಪೆ ಪಕ್ಕದ ಕಾಡನಕೊಪ್ಪಲು ಗ್ರಾಮದ ದಲಿತ ಸಮುದಾಯದ ಗ್ರಾಮಸ್ಥರು ಹಾಗೂ ಇದೇ ಗ್ರಾಮದ ರೈತ ಸಂಘದದವರು ಒಟ್ಟಾಗಿ ಸೇರಿ ಹರೀಶ್ ಗೌಡರ ಚುನಾವಣೆ ಖರ್ಚಿಗೆ 10ಲಕ್ಷ ರೂಪಾಯಿ ಹಣ ವನ್ನು ದೇಣಿಗೆ ನೀಡಿ ತಮ್ಮ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಡಿ.ಹರೀಶ್ ಗೌಡರ ಗೆಲುವು ಪ್ರತಿಯೊಬ್ಬರ ಗೆಲುವಾಗಲೆಂದು ಹೇಳಿ ಅಭಿಮಾನ ಮೆರೆದ್ದಿದಾರೆ .

Advertisement

ಗ್ರಾಮಸ್ಥರ ಪ್ರೀತಿ ಪೂರ್ವಕ ದೇಣಿಗೆಯನ್ನು ಭಾವುಕರಾಗಿ ಸ್ವೀಕರಿಸಿದ ಜಿ.ಡಿ.ಹರೀಶ್ ಗೌಡರು ನನ್ನ ಉಸಿರು ಇರುವ ವರೆಗೂ ಈ ಊರನ್ನು ಹಾಗೂ ಇಲ್ಲಿನ ಜನರನ್ನು ಮರೆಯಲು ಸಾಧ್ಯವಿಲ್ಲ. ಇಂತ ಪ್ರೀತಿ ವಿಶ್ವಾಸ ಪಡೆಯಲು ನಾನು ಪುಣ್ಯ ಮಾಡಿದ್ದೇನೆಂದು ಪ್ರೀತಿ ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಎಪಿಎಂಸಿ ಮಾಜಿ ಸದಸ್ಯ ಗೋವಿಂದೇಗೌಡ,ಹಳ್ಳಿಮನೆ ಸಂದೇಶ್ ಸ್ಯಾಂಡಿ,ರೆಡ್ಡಿ ನಾಗರಾಜ್,ಮಹದೇವ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next