Advertisement

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

11:10 PM Oct 02, 2023 | Team Udayavani |

ಮಂಗಳೂರು: ನಗರದ ಕದ್ರಿಕಂಬಳದ ಫ್ಲ್ಯಾಟ್‌ನಲ್ಲಿ ರವಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹೇಶ್‌ ಮೋಟಾರ್ಸ್ ಮಾಲಕ, ಉದ್ಯಮಿ ಪ್ರಕಾಶ್‌ ಶೇಖ (42) ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಶಕ್ತಿನಗರದ ಶ್ಮಶಾನದಲ್ಲಿ ನೆರವೇರಿತು.

Advertisement

ಖಾಸಗಿ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದ ಪಾರ್ಥಿವ ಶರೀರವನ್ನು ಕುಲಶೇಖರದ ಅವರ ಮೂಲ ಮನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇತರ ವಾಹನಗಳ ಸಾಲಿನ ಜತೆ ಮಹೇಶ್‌ ಮೋಟಾರ್ಸ್ ನ 32 ಖಾಲಿ ಬಸ್‌ಗಳು ಸಾಗುತ್ತಿರುವ ದೃಶ್ಯ ಮನಕಲಕುವಂತಿತ್ತು.

ಪ್ರಕಾಶ್‌ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next