Advertisement

ಶೀಘ್ರ ಜಯನಗರ ವಾಣಿಜ್ಯ ಸಂಕೀರ್ಣ ಪೂರ್ಣ

04:41 PM Jul 18, 2021 | Team Udayavani |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಜಯನಗರದ ವಾಣಿಜ್ಯ ಸಂಕೀರ್ಣದಹೊಸ ಕಟ್ಟಡದ ಕಾಮಗಾರಿಯನ್ನುಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‌ ಗುಪ್ತ ತಿಳಿಸಿದ್ದಾರೆ.

Advertisement

ಶನಿವಾರ,ಜಯನಗರವಿಧಾನಸಭಾಕ್ಷೇತ್ರ ವ್ಯಾಪ್ತಿಯ ನಾಲ್ಕನೇ ಬ್ಲಾಕ್‌ನವಾಣಿಜ್ಯ ಸಂಕೀರ್ಣಕ್ಕೆ ಶಾಸಕಿಸೌಮ್ಯರೆಡ್ಡಿ ಅವರೊಂದಿಗೆ ಭೇಟಿ ನೀಡಿಪರಿಶೀಲಿಸಿದ ಅವರು, ಜಯನಗರವಾಣಿಜ್ಯ ಸಂಕೀರ್ಣದ ಕಟ್ಟಡದ ನೀಲಿನಕ್ಷೆಯನ್ನು ಪರಿಶೀಲಿಸಿ, ಶೀಘ್ರದಲ್ಲಿಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಅಲ್ಲದೆ, ಕಾಲ ಮಿತಿಯೊಳಗೆಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಶಾಸಕಿ ಸೌಮ್ಯರೆಡ್ಡಿ ಮಾತನಾಡಿ, ಈವಾಣಿಜ್ಯ ಸಂಕೀರ್ಣ ನಗರದ ಪ್ರತಿಷ್ಟಿತಶಾಪಿಂಗ್‌ ಮಾಲ್‌ ಆಗಿತ್ತು.ಕಳೆದ ಆರುವರ್ಷಗಳಲ್ಲಿ ವಾಣಿಜ್ಯ ಕಟ್ಟಡಆಧುನಿಕರಣ ಮಾಡಲು ಯೋಜನೆರೂಪಿಸಲಾಗಿದೆ. ಆದರೆ, ಕಾಮಗಾರಿನಿಧಾನಗತಿಯಿಂದ ಸಾರ್ವಜನಿಕರಿಗೆಬಳಕೆಯಾಗದೆ ಅನುಪಯುಕ್ತವಾಗಿದೆ.ಕೂಡಲೇ ಪಾಲಿಕೆ ಮುಖ್ಯ ಆಯುಕ್ತರುಈ ಬಗ್ಗೆ ಗಮನಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.ವಾಣಿಜ್ಯಸಂಕೀರ್ಣದಮಳಿಗೆದಾರರಿಗೆಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಮನವಿಮಾಡಿದರು. ಪಾಲಿಕೆ ವಿಶೇಷ ಆಯುಕ್ತೆತುಳಸಿ ಮದ್ದಿನೇನಿ, ಮಾಜಿ ಆಡಳಿತಪಕ್ಷದ ನಾಯಕ ಎನ್‌.ನಾಗರಾಜ್‌ಹಾಗೂ ಮತ್ತಿತರ ಅಧಿಕಾರಿಗಳುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next