Advertisement

ಇಂದು ಮತ್ತೆ ಸಂಪೂರ್ಣ ಲಾಕ್‌ಡೌನ್‌

05:01 AM May 24, 2020 | Team Udayavani |

ಮೈಸೂರು: ನಾಲ್ಕನೇ ಹಂತದ ಲಾಕ್‌ಡೌನ್‌ ನಲ್ಲಿ ಕೆಲವು ಸಡಿಲಿಕೆಯಿಂದಾಗಿ ಸಹಜ ಸ್ಥಿತಿಗೆ ಮರಳಿದ್ದ ಮೈಸೂರು ಭಾನುವಾರ ಮತ್ತೆ ಲಾಕ್‌ ಆಗಲಿದೆ. ಮೇ 31ರವರೆಗೆ ಪ್ರತಿ ಭಾನುವಾರದಂದು ಲಾಕ್‌ಡೌನ್‌ ಮಾಡಲು ರಾಜ್ಯ ಸರ್ಕಾರ  ನಿರ್ಧರಿಸಿರುವುದರಿಂದ ಜಿಲ್ಲೆ ಮತ್ತೆ ಸ್ತಬಟಛಿವಾಗಲಿದೆ. ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಮಾ.24ರಿಂದ ಜಾರಿಯಾದ ಲಾಕ್‌ಡೌನ್‌ 4ನೇ ಹಂತ ತಲುಪಿದೆ. ಮೊದಲ ಮೂರು ಹಂತಗಳಲ್ಲಿ ಕಟ್ಟುನಿಟ್ಟಿನಿಂದ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಇದಕ್ಕೆ ಜನರೂ ಸಹ ಬೆಂಬಲ ನೀಡುವ ಮೂಲಕ ಎಲ್ಲಾ ಆದೇಶಗಳನ್ನು ಪಾಲನೆ ಮಾಡಿದ್ದರು.

Advertisement

ಓಡಾಟ ನಿರ್ಬಂಧ: ಮೇ 18ರಿಂದ 31ರವರೆಗೆ ಜಾರಿಯಾದ 4ನೇ ಹಂತದ ಲಾಕ್‌ ಡೌನ್‌ನಲ್ಲಿ ಕೆಲ ಸಡಿಲಿಕೆ ಮಾಡಲಾಗಿ ದೆ. ಆದರೆ, ಸೋಂಕು ಈ ಅವಧಿಯ  ಪ್ರತಿ ಭಾನುವಾರದಂದು ಸಂಪೂರ್ಣ ಲಾಕ್‌ ಡೌನ್‌ ಮಾಡಲು ರಾಜ್ಯ ಸರ್ಕಾರ  ನಿರ್ಧರಿಸಿರುವುದರಿಂದ ಇಂದು ಮೈಸೂರಿ ನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಾಗಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆ ಹಾಗೂ ವಾಹನ ಸಂಚಾರ ಬಂದ್‌ ಆಗಲಿದೆ.

ಸಾರ್ವಜನಿಕರು ರಸ್ತೆಯಲ್ಲಿ ಓಡಾಡು ವುದಕ್ಕೂ ನಿರ್ಬಂಧ ಹೇರಲಾಗಿದೆ. ಸರ್ಕಾರಿ, ಖಾಸಗಿ ಬಸ್ಸುಗಳು, ಕಾರು, ಆಟೋ, ದ್ವಿಚಕ್ರ ವಾಹನ ಸೇರಿದಂತೆ ಅಗತ್ಯ  ಸೇವೆ ನೀಡುವ ವಾಹನಗಳನ್ನು ಹೊರತು  ಪಡಿಸಿ, ಎಲ್ಲಾ ರೀತಿಯ ವಾಹನಗಳು ರಸ್ತೆಗಿಳಿಯದಂತೆ ನಿರ್ಬಂಧ  ವಿಧಿಸಲಾಗಿದೆ. ಹೋಟೆಲ್‌ಗ‌ಳು, ಸೆಲೂನ್‌ಗಳು, ಬಾರ್‌ ಗಳು, ರೆಸ್ಟೋರೆಂಟ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌, ಮಾಲ್‌ಗ‌ಳು, ಟೀ ಸ್ಟಾಲ್ಸ್‌, ಫ‌ುಟ್‌ ಪಾತ್‌ ವೆಂಡರ್, ಪಾನ್‌ ಶಾಪ್ಸ್‌ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್‌ ಆಗಲಿವೆ.

ಕೇವಲ ದಿನಸಿ,  ತರಕಾರಿ, ಹಾಲು, ಔಷಧ, ಆರೋಗ್ಯ ಸೇವೆ, ಮಾಂಸ ಸೇರಿದಂತೆ ತುರ್ತು ಸೇವೆಗಳ ಅಂಗಡಿಗಳು ಮಾತ್ರ ತೆರೆಯಲಿವೆ.  ಪೆಟ್ರೋಲ್‌ ಬಂಕ್‌ ಸಹ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಎಲ್ಲಾ ಅಂಗಡಿ  ಗಳು ಬೆಳಗ್ಗೆ 7ರಿಂದ ಸಂಜೆ 7  ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.  ಗರದ ಎಲ್ಲಾ ಮಾರುಕಟ್ಟೆಗಳು, ಉದ್ಯಾನವನಗಳು, ಆಟದ ಮೈದಾನಗಳು ಬಂದ್‌ ಆಗಲಿದ್ದು, ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತದಂತೆ ಹಾಗೂ ಎಲ್ಲಾ ರೀತಿಯ  ವ್ಯಾಪಾರ ವ್ಯವಹಾರಗಳು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

ಅಂಗಡಿ ತೆರೆಯುವಂತಿಲ್ಲ: ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಕರ್ಪೂ ಜಾರಿಯಲ್ಲಿರಲಿದ್ದು, ಹಾಲು, ತರಕಾರಿ, ದಿನಸಿ, ಆರೋಗ್ಯ ಮತ್ತು  ಹೋಟೆಲ್‌ ಪಾರ್ಸೆಲ್‌ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ಅಂಗಡಿ ಮುಂಗಟ್ಟು ಮಳಿಗೆಗಳನ್ನು ತೆರೆಯುವಂತಿಲ್ಲ. ಯಾವುದೇ ವಾಣಿಜ್ಯ ಅಂಗಡಿ -ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ. ಮದ್ಯದಂಗಡಿಗಳನ್ನು ಕೂಡ  ತೆರೆಯುವಂತಿಲ್ಲ. ತೆರೆದಲ್ಲಿ ಕ್ರಮ ಕೈಗೊಳ್ಳ ಲಾಗುವುದು. ಈಗಾಗಲೇ ಈ ಕುರಿತು ಸೂಚನೆ ನೀಡಿದ್ದೇವೆ ಎಂದರು.

Advertisement

ಮೈಸೂರಿಗೆ ಪ್ರವೇಶ ಕಲ್ಪಿಸುವ ಚೆಕ್‌ಪೋಸ್ಟ್‌ ಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಹೊರ ರಾಜ್ಯದಿಂದ 700ಕ್ಕೂ ಹೆಚ್ಚು ಮಂದಿ ಈಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ. ಹೊರ ರಾಜ್ಯದಿಂದ ಬಂದವರನ್ನು ಕ್ವಾರೆಂಟೈನ್‌ ಮಾಡಲಾಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ ಅನಗತ್ಯ ಪಾಸ್‌ ವಿತರಣೆಗೆ ಬ್ರೇಕ್‌ ಹಾಕಲಾಗಿದೆ.
-ಡಾ.ಚಂದ್ರಗುಪ್ತ, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next