Advertisement

Fruad Case: ಉದ್ಯಮಿ ವಂಚನೆ ಪ್ರಕರಣದ ಆರೋಪಿ ಗಗನ್ ಕಡೂರಿಗೆ

10:38 AM Sep 20, 2023 | Team Udayavani |

ಕಡೂರು: ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸಲು ಚೈತ್ರಾ ಕುಂದಾಪುರ ಜೊತೆ ಸೇರಿ ವಂಚನೆ ಪ್ರಕರಣದ ಆರೋಪಿಯಾಗಿರುವ ಕಡೂರಿನ ಗಗನ್ ನಿವಾಸಕ್ಕೆ ಸಿಸಿಬಿ ಪೊಲೀಸರು ಸೆ.19ರ ಮಂಗಳವಾರ ಆರೋಪಿಯನ್ನು ಕರೆತಂದು ಪರಿಶೀಲಿಸಿದರು.

Advertisement

ಬೆಂಗಳೂರಿನ ಸಿಸಿಬಿ ಪೊಲೀಸರ 6 ಜನರ ತಂಡವು ಗಗನ್‌ನನ್ನು ಕಡೂರಿನ ಕೆ.ಎಂ.ರಸ್ತೆಯಲ್ಲಿನ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿರುವ ಅವನ ನಿವಾಸಕ್ಕೆ ಕರೆತಂದು ದಾಖಲೆಗಳ ಪರಿಶೀಲನೆ ನಡೆಸಿದರು. ನಂತರ ದೇವರಾಜ ಅರಸು ರಸ್ತೆಯಲ್ಲಿರುವ ಎಚ್.ಡಿ.ಎಫ್.ಸಿ.ಬ್ಯಾಂಕಿಗೆ ತೆರಳಿ ಆರೋಪಿ ಗಗನ್ ಖಾತೆ ಕುರಿತು ಪರಿಶೀಲನೆ ನಡೆಸಿದರು.

ಆರೋಪಿ ಗಗನ್‌ ನನ್ನು ಸಿಸಿಬಿ ಪೊಲೀಸ್ ಕರೆತಂದಾಗ ರಸ್ತೆಯ ಬದಿಗಳಲ್ಲಿ ಸಾರ್ವಜನಿಕರು ಅಕ್ಕಪಕ್ಕದವರು ನಿಂತು ನೋಡುತ್ತಿದ್ದರು. ಪತ್ರಕರ್ತರು ಸಿಸಿಬಿ ಅಧಿಕಾರಿಗಳನ್ನು ಗಗನ್ ಹಾಗೂ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next