Advertisement

ಕಾರ್ಮೋಡ ಸರಿಸಿ ಬಂದವರು…

09:06 AM May 02, 2019 | Lakshmi GovindaRaju |

ಆ ಹುಡುಗನಿಗೊಂದು ಆಸೆ ಇತ್ತು. ಕುದುರೆಮುಖ ಬೆಟ್ಟದ ಮೇಲೇರಿ ಒಂದು ಸಿನಿಮಾ ಮಾಡಬೇಕು ಅನ್ನೋದು. ಅಂಥದ್ದೊಂದು ಆಸೆ ಹುಟ್ಟುಕೊಂಡಿದ್ದು ಚಿಕ್ಕವಯಸ್ಸಿನಲ್ಲಿ. ಆ ಆಸೆ ಈಗ ಈಡೇರಿದೆ. “ಕಾರ್ಮೋಡ ಸರಿದು’ ಎಂಬ ಚಿತ್ರ ಮಾಡುವ ಮೂಲಕ ತನ್ನೆಲ್ಲಾ ಕನಸು ನನಸು ಮಾಡಿಕೊಂಡವರು ಮಂಜು ರಾಜಣ್ಣ.

Advertisement

ಅವರಷ್ಟೇ ಅಲ್ಲ, ಅವರೊಂದಿಗೆ ಉದಯಕುಮಾರ್‌ ಕೂಡ ಅಂದುಕೊಂಡಿದ್ದನ್ನು ಮಾಡಿದ್ದೇವೆ ಎಂಬ ಖುಷಿಯಲ್ಲಿದ್ದಾರೆ. ಹೌದು, ಇದು ಹೊಸಬರ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ತಿಂಗಳಲ್ಲಿ ಪ್ರೇಕ್ಷಕರ ಎದುರು ಬರಲಿದೆ.

ಉದಯಕುಮಾರ್‌ ಚಿತ್ರ ನಿರ್ದೇಶಕರು. ಮಂಜು ರಾಜಣ್ಣ ನಾಯಕ ನಟ. ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲೆ ಅತೀವ ಪ್ರೀತಿ ಇಟ್ಟುಕೊಂಡು, ತಮ್ಮ ಕಥೆ ಹೀಗೆ ಬರಬೇಕು, ಚಿತ್ರ ಹೀಗೆಯೇ ಮೂಡಿಬರಬೇಕು. ಇಂತಲ್ಲೇ ಚಿತ್ರೀಕರಣ ಆಗಬೇಕು ಎಂಬ ಯೋಚನೆ, “ಕಾರ್ಮೋಡ ಸರಿದು’ ಮೂಲಕ ಪಕ್ಕಾ ಆಗಿದೆ.

ಇಲ್ಲಿ ಕೆಲಸ ಮಾಡಿರುವುದು ಹೊಸ ಪ್ರತಿಭೆಗಳು. ಮಳೆಗಾಲ ವೇಳೆಯಲ್ಲೇ ಚಿತ್ರೀಕರಣ ಮಾಡಿದ್ದಾರೆ. ಹಾಗಾಗಿ, ಇಲ್ಲಿ ಎಲ್ಲವೂ ಫ್ರೆಶ್‌ ಫೀಲ್‌ಕೊಡುತ್ತದೆ. ಹಾಗಾದರೆ ಚಿತ್ರದ ಕಥೆ ಏನು? ಅದಕ್ಕೆ ಉತ್ತರ ಕೊಡುವ ನಿರ್ದೇಶಕ ಉದಯ್‌ಕುಮಾರ್‌, “ಈಗ ಮನುಷ್ಯನ ಬದುಕು ಒಂದು ರೀತಿ ಯಾಂತ್ರಿಕ ಜೀವನವಾಗಿದೆ.

ಸಂಬಂಧಗಳಿಗೆ ಬೆಲೆ ಇಲ್ಲ, ಭಾವನೆಗಳಿಗಂತೂ ಅರ್ಥವೇ ಇಲ್ಲವಾಗಿದೆ. ಎಲ್ಲವನ್ನೂ ಬದಿಗೊತ್ತಿ ಸ್ವಾರ್ಥ ಮನೋಭಾವದಲ್ಲೇ, ಬದುಕು ಸವೆಸುವಂತಾಗಿದೆ. ಇಂತಹ ಸೂಕ್ಷ್ಮ ಅಂಶಗಳು ಚಿತ್ರದ ಜೀವಾಳ. ಇಲ್ಲಿ ಮನುಷ್ಯನ ಭಾವನೆಗಳು ಕಾಣೆಯಾದಾಗ, ಕರುಣೆ, ಪ್ರೀತಿಗಳೇ ಇಲ್ಲವಾದಾಗ, ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಚಿತ್ರದ ಹೈಲೈಟ್‌.

Advertisement

ಇಲ್ಲಿ ಯುವ ಮನಸ್ಸುಗಳ ಜೊತೆಗೆ ಹಿರಿಯ ಜೀವಗಳಿಗೂ ದಕ್ಕುವ ಅಂಶಗಳಿವೆ. ಎಲ್ಲಾ ವರ್ಗಕ್ಕೂ ಇದು ಹಿಡಿಸುವ ಚಿತ್ರವಾಗಲಿದೆ ಎಮಬುದು ನಿರ್ದೇಶಕರ ಮಾತು. ಇನ್ನು, ಮಂಜು ರಾಜಣ್ಣ ಅವರಿಲ್ಲಿ ತುಂಬಾ ಆಸೆ ಪಟ್ಟು, ಕಷ್ಟಪಟ್ಟು, ಇಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಮೊದಲ ಚಿತ್ರವಾದ್ದರಿಂದ ಎಲ್ಲವನ್ನೂ ಕರಗತ ಮಾಡಿಕೊಂಡೇ ಕೆಲಸ ಮಾಡಿದ್ದಾರೆ.

ಆದರೂ, ಮೊದಲ ಚಿತ್ರವಾದ್ದರಿಂದ ರಿಸ್ಕ್ ಸಹಜವಾಗಿಯೇ ಇತ್ತಂತೆ. ಚಿತ್ರದಲ್ಲಿ ತರಹೇವಾರಿ ಪಾತ್ರಗಳಿವೆ. ಯಾವ ಪಾತ್ರಗಳಿಗೆ ಕಾರ್ಮೋಡ ಆವರಿಸಿಕೊಳ್ಳುತ್ತದೆ. ಅದು ಸರಿದಾಗ, ಯಾವ ಪಾತ್ರಗಳ ಮೊಗದಲ್ಲಿ ಮಂದಹಾಸ ಮೂಡುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ಅವರು, ಇಲ್ಲಿ ತಿರುವುಗಳಿಗೆ ಹೆಚ್ಚು ಮಹತ್ವ ಕಲ್ಪಿಸಲಾಗಿದೆ.

ಸಾಕಷ್ಟು ಘಟನೆಗಳು ನಡೆಯುತ್ತಲೇ ಕುತೂಹಲ ಕಾಯ್ದುಕೊಂಡು ಹೋಗುತ್ತದೆ’ ಎಂದು ವಿವರ ಕೊಡುತ್ತಾರೆ. ಇಡೀ ಸಿನಿಮಾ “ಕುದುರೆಮುಖ, ಕಳಸ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಮಳೆಗಾಲದಲ್ಲೇ ಚಿತ್ರೀಕರಿಸಿದ್ದರಿಂದ ರಿಸ್ಕ್ ಸಾಮಾನ್ಯವಾಗಿತ್ತು. ಸಮಸ್ಯೆಗಳ ನಡುವೆಯೇ ಚಿತ್ರೀಕರಣ ಯಶಸ್ವಿಯಾಗಿದೆ. ಬಹುತೇಕ ಜನರಿಗೆ “ಕಾರ್ಮೋಡ ಸರಿದು’ ಆಪ್ತವೆನಿಸದೇ ಇರದು ಎಂಬುದು ಅವರ ಮಾತು.

ಚಿತ್ರದಲ್ಲಿ ಅದ್ವಿತಿ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಸತೀಶ್‌ ಬಾಬು ಸಂಗೀತವಿದ್ದು, ಮೂರು ಹಾಡುಗಳಿವೆ. “ಬಾಹುಬಲಿ’ ಚಿತ್ರಕ್ಕೆ ಹಾಡಿದ್ದ ಗಾಯಕರು ಇಲ್ಲೂ ಹಾಡಿದ್ದಾರೆ ಎಂಬುದು ವಿಶೇಷ. ಈಗಾಗಲೇ ಚಿತ್ರದ ಟ್ರೇಲರ್‌ ಮತ್ತು ಹಾಡಿಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಗಂಟೆಗಳಲ್ಲೇ ಲಕ್ಷ ಹಿಟ್ಸ್‌ ಸಿಕ್ಕಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next