Advertisement

Chhattisgarh: ಕಾರ್ಮಿಕರಿಗೆ ಹಣ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ: ರಾಹುಲ್‌

11:07 PM Oct 29, 2023 | Team Udayavani |

ಹೊಸದಿಲ್ಲಿ: ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರವನ್ನು ಅಧಿಕಾರಕ್ಕೆ ತಂದರೆ ಬಡವರಿಗೆ 10 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಒದಗಿಸುತ್ತೇವೆ ಮತ್ತು ಭೂರಹಿತ ಕಾರ್ಮಿಕರಿಗೆ ವರ್ಷಕ್ಕೆ 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ.

Advertisement

2 ದಿನಗಳ ಛತ್ತೀಸ್‌ಗಢ ಪ್ರವಾಸದ ಲ್ಲಿರುವ ಅವರು ರವಿವಾರ ರಾಜನಂದ ಗಾಂವ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸನ್ನು ನೀವು ಮತ್ತೂಮ್ಮೆ ಆಶೀರ್ವದಿಸಿ. ಕಾಂಗ್ರೆಸ್‌ ಯಾವತ್ತೂ ಬಡವರು, ಕಾರ್ಮಿಕರು, ರೈತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗದವರು ಮತ್ತು ದಲಿತರ ಏಳ್ಗೆಗಾಗಿ ಕೆಲಸ ಮಾಡುತ್ತದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕೇವಲ ಅದಾನಿಯಂಥ ಕೋಟ್ಯಧಿಪತಿ ಉದ್ಯಮಿಗಳಿಗಾಗಿ ಮಾತ್ರವೇ ಕೆಲಸ ಮಾಡುತ್ತದೆ ಎಂದರು. ಕೇಂದ್ರದಲ್ಲೂ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ದೇಶಾದ್ಯಂತ ಜಾತಿ ಗಣತಿ ನಡೆಸುತ್ತೇವೆ ಎಂಬ ಭರವಸೆಯನ್ನೂ ಅವರು ನೀಡಿದರು.

ಭತ್ತ ಕೊಯ್ಲು ಮಾಡಿದ ರಾಹುಲ್‌: ಛತ್ತೀಸ್‌ಗಢದಲ್ಲಿ ಚುನಾವಣ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ರಾಯು³ರ ಸಮೀಪದ ಹಳ್ಳಿಯೊಂದರಲ್ಲಿ ಅನ್ನದಾತರೊಂದಿಗೆ ಸೇರಿ ಭತ್ತ ಕೊಯ್ಲು ಮಾಡಿದ್ದಾರೆ.

“ಮಂದಿರಕ್ಕೆ 1.11 ಲಕ್ಷ ರೂ. ಕೊಟ್ಟಿದ್ದೇನೆ”
ನಾನು ಕೂಡ ಒಬ್ಬ ಒಳ್ಳೆಯ ಹಿಂದೂ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾನೂ 1.11 ಲಕ್ಷ ರೂ. ದೇಣಿಗೆ ನೀಡಿದ್ದೇನೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ. ಭೋಪಾಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಸನಾತನ ಧರ್ಮವನ್ನು ಅನುಸರಿಸುತ್ತೇನೆ. ನಾನೊಬ್ಬ ಒಳ್ಳೆಯ ಹಿಂದೂ. ಆದರೆ ಚುನಾವಣೆಯಲ್ಲಿ ಧರ್ಮವನ್ನು ಬಳಸಬಾರದು. ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ನಾಯಕರಾದ ಸಿಎಂ ಶಿವರಾಜ್‌ ಸಿಂಗ್‌ 1 ಲಕ್ಷ ರೂ. ಕೊಟ್ಟರು, ನಾನು 1.11 ಲಕ್ಷ ರೂ. ಕೊಟ್ಟಿದ್ದೇನೆ. ಚೆಕ್‌ ಅನ್ನು ನೇರವಾಗಿ ಪ್ರಧಾನಿ ಮೋದಿಯವರಿಗೇ ಕಳುಹಿಸಿಕೊಟ್ಟಿದ್ದೆ ಎಂದಿದ್ದಾರೆ. ಇದೇ ವೇಳೆ ಮಧ್ಯಪ್ರದೇಶದಲ್ಲಿ ದಿಗ್ವಿಜಯ್‌ ಸಿಂಗ್‌ ಮತ್ತು ಕಮಲ್‌ನಾಥ್‌ ನಡುವೆ ಒಳಜಗಳ ತೀವ್ರಗೊಂಡಿದೆ ಎಂಬ ಸುದ್ದಿಗಳನ್ನು ಸಿಂಗ್‌ ತಳ್ಳಿಹಾಕಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next