Advertisement

ಬಾಲರಾಜ ಬ್ರಿಗೇಡ್‌ನಿಂದ ಉಚಿತ ಆರೋಗ್ಯ ಶಿಬಿರ

03:13 PM Jul 14, 2022 | Team Udayavani |

ಸೇಡಂ: ವಿನೂತನ ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಬಾಲರಾಜ ಬ್ರಿಗೇಡ್‌ ಮುಂಬರುವ ದಿನಗಳಲ್ಲಿ ವಿಧಾನಸಭೆ ಕ್ಷೇತ್ರದ 133 ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲು ಮುಂದಾಗಿದೆ ಎಂದು ಜೆಡಿಎಸ್‌ ಮುಖಂಡ ಬಾಲರಾಜ ಗುತ್ತೇದಾರ ಹೇಳಿದರು.

Advertisement

ತಾಲೂಕಿನ ಮೋತಕಪಲ್ಲಿ ಗ್ರಾಮದ ಶ್ರೀ ಬಲಭೀಮಸೇನ ದೇವಾಲಯದ ಕಲ್ಯಾಣ ಮಂಟಪದಲ್ಲಿ ಶಾರದಾ ಚಾರಿಟೇಬಲ್‌ ಟ್ರಸ್ಟ್‌, ಬಾಲರಾಜ ಬ್ರಿಗೇಡ್‌ ಫೌಂಡೇಷನ್‌ ಸೇಡಂ ಹಾಗೂ ಯುನೈಟೆಡ್‌ ಆಸ್ಪತ್ರೆ ಕಲಬುರಗಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಳ್ಳಿ ಹಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಉಚಿತ ಆಂಬ್ಯುಲೆನ್ಸ್‌ ಸೇವೆಯನ್ನು ನಿರಂತರವಾಗಿ ಜನತೆಯ ಸೇವೆಗಾಗಿ ಮೀಸಲಿರಿಸಲಾಗಿದೆ. ಕೊರೊನಾದಂತ ಮಹಾಮಾರಿಯ ಸಂದರ್ಭದಲ್ಲಿಯೂ ಸೇವೆ ಮಾಡಿದ್ದೇವೆ. ಈಗ ಪ್ರತಿ ಹಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಜನಸೇವೆಗೆ ಮುಂದಾಗಿದ್ದೇವೆ ಎಂದರು.

ಬಾಲರಾಜ ಬ್ರಿಗೇಡ್‌ ಅಧ್ಯಕ್ಷ ಶಿವಕುಮಾರ ನಿಡಗುಂದಾ, ಗೋವರ್ಧನರೆಡ್ಡಿ ಮೋತಕಪಲ್ಲಿ, ವೆಂಕಟರೆಡ್ಡಿ ಗಾಡದಾನ, ಪರಮಾರೆಡ್ಡಿ ಶಕ್ಲಾಸಪಲ್ಲಿ, ಮುಖಂಡರಾದ ಹಣಮಯ್ಯ ಗುತ್ತೇದಾರ, ಬಸಯ್ಯ ಗೌಡ್ಸ್‌, ಪರಮೇಶ್ವರ ಪಾಟೀಲ, ಸೇವ್ಯಾನಾಯಕ, ಮಹೇಶ ಹೂಗಾರ, ಜಗನ್ನಾಥ, ಉದಯ ಕೋಲಕುಂದಾ, ಭೀಮಶಪ್ಪ, ಲಕ್ಷ್ಮೀಕಾಂತ, ಭೀಮು, ಸಿದ್ದು, ಸುದರ್ಶನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next