Advertisement

Free Scheme: ಉಚಿತ ಕೊಡುಗೆ- ಉಪರಾಷ್ಟ್ರಪತಿ ಆಕ್ಷೇಪ

08:37 AM Dec 11, 2023 | Pranav MS |

ಹೊಸದಿಲ್ಲಿ: ಪೈಪೋಟಿಯಲ್ಲಿ ಪಕ್ಷಗಳು ಉಚಿತ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಯೋಜನಾ ವೆಚ್ಚಗಳ ಆದ್ಯತೆಯ ದಿಕ್ಕನ್ನೇ ಬದಲಿಸುತ್ತಿದ್ದು, ಸೂಕ್ಮ ಆರ್ಥಿಕತೆಯ ಸ್ಥಿರತೆಯ ಚೌಕಟ್ಟನ್ನೇ ಕೊರೆದುಹಾಕುತ್ತಿವೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಖರ್‌ ರವಿವಾರ ಕಳವಳ ವ್ಯಕ್ತ ಪಡಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಮಾನವ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಾನವ ಹಕ್ಕುಗಳು ಅನುಷ್ಠಾನಗೊಳ್ಳುತ್ತಿರು ವಂತೆ ಬೇರೆ ಯಾವ ದೇಶದಲ್ಲೂ ಅನುಷ್ಠಾನ ಗೊಳ್ಳುತ್ತಿಲ್ಲ ಎಂದಿದ್ದಾರೆ. ನಮ್ಮ ದೇಶದಲ್ಲಿ ಮಾನವ ಹಕ್ಕುಗಳು, ಮೌಲ್ಯ ಗಳು ವೃದ್ಧಿಗೊಂಡಿರುವುದರಿಂದ ಇದು ನಮ್ಮ ಗೌರವಕಾಲವೂ ಆಗಿದೆ ಎಂದಿದ್ದಾರೆ. ಇದೇ ವೇಳೆ ಉಚಿತ ಕೊಡುಗೆಗಳ ರಾಜಕೀಯದ ಬಗ್ಗೆಯೂ ಕಳವಳ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next