Advertisement

ಘಟಕ ನಿರ್ಮಾಣದಿಂದ ತ್ಯಾಜ್ಯಕ್ಕೆ ಮುಕ್ತಿ: ಸುನಿಲ್‌ ಕುಮಾರ್‌

08:45 PM Jan 02, 2020 | Sriram |

ಹೆಬ್ರಿ: ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಾಗುವುದರಿಂದ ಸ್ಥಳೀಯ ತ್ಯಾಜ್ಯಗಳಿಗೆ ಮುಕ್ತಿ ದೊರೆತಂತಾಗುತ್ತದೆ. ತ್ಯಾಜ್ಯವನ್ನು ಈಗ ಸಂಪನ್ಮೂಲವಾಗಿ ಬಳಕೆ ಮಾಡಲು ಇಂತಹ ಘಟಕಗಳು ಅನುಕೂಲವಾಗಿವೆ ಎಂದು ಶಾಸಕ ವಿ.ಸುನಿಲ್‌ ಕುಮಾರ್‌ ಹೇಳಿದರು.

Advertisement

ಅವರು ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಬೇಳಂಜೆ ದ್ರವ ಮತ್ತು ಘನ ತಾಜ್ಯ ವಿಲೇವಾರಿ ಘಟಕ(ಎಸ್‌ಎಲ್‌ಆರ್‌ಎಂ)ವನ್ನು ಜ.1 ರಂದು ಉದ್ಘಾಟಿಸಿ ಮಾತನಾಡಿದರು.

ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ತಾ.ಪಂ. ಸದಸ್ಯ ಅಮೃತ್‌ ಕುಮಾರ್‌ ಶೆಟ್ಟಿ, ಕುಚ್ಚಾರು ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next