Advertisement

ಮೋಸದಿಂದ ಕಾರು ಮಾರಾಟ: ಬಂಧನ

10:27 AM Aug 03, 2019 | keerthan |

ಬ್ರಹ್ಮಾವರ: ಕಾರನ್ನು ಮೋಸದಿಂದ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ಲ ಯಾನೆ ಅಬ್ಟಾಸ್‌ ತಲಪಾಡಿ, ಮಹಮ್ಮದ್‌ ಸಫಾನ್‌ ವಿಟ್ಲ ಬಂಧಿತರು. ಇಬ್ರಾಹಿಂ ಮಂಗಳೂರು ತಲೆಮರೆಸಿ ಕೊಂಡಿದ್ದಾನೆ.

Advertisement

ಪ್ರಕರಣದ ವಿವರ: ಲೀಸ್‌ಗೆ ಕೊಟ್ಟ ಕಾರುಗಳನ್ನು ಮತ್ತು ಅಂತರ್ಜಾಲದಲ್ಲಿ ಮಾರಾಟಕ್ಕೆ ಇರುವ ಕಾರುಗಳನ್ನು ನಮಗೆ ಬೇಕು ಎಂದು ಸುಳ್ಳು ಹೇಳಿ ಮುಂಗಡ ಹಣ ನೀಡುತ್ತಿದ್ದರು. ಬಳಿಕ ಕರಾರು ಪತ್ರ ಮಾಡಿ ಕಾರುಗಳನ್ನು ದೂರದ ಊರುಗಳಿಗೆ ತೆಗೆದುಕೊಂಡು ಹೋಗಿ ಸ್ವಂತ ಕಾರೆಂದು ನಂಬಿಸಿ, ಆರ್‌.ಸಿ.ಯಲ್ಲಿ ಹೆಸರು ಬದಲಾವಣೆ ಆಗಲು ಬಾಕಿ ಎಂದು ಹೇಳುತ್ತಿದ್ದರು. ಬಳಿಕ ಅಡ್ವಾನ್ಸ್‌ ಹಣ ಪಡೆದು ಕಾರು ಮಾರಿ ಮೋಸ ಮಾಡುತ್ತಿದ್ದರು.

ಬಂಧಿತರಿಂದ ಒಟ್ಟು 39 ಲ. ರೂ. ಮೌಲ್ಯದ 5 ಕಾರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇವುಗಳನ್ನು ಬಳ್ಳಾರಿಯಲ್ಲಿ ಶಿವ ಕುಮಾರ ಅವರಿಗೆ ಮಾರಾಟ ಮಾಡಲಾಗಿತ್ತು. ಈ ಕುರಿತು ಕುರ್ಪಾಡಿಯ ಸುನಿಲ್‌ ದೂರು ನೀಡಿದ್ದರು. ಆರೋಪಿಗಳ ಪೈಕಿ ಅಬ್ದುಲ್ಲ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಬಜಪೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next