Advertisement

ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ: ಆರೋಪಿಗೆ ಶಿಕ್ಷೆ  

07:26 PM Aug 03, 2022 | Team Udayavani |

ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ ಮಾಡಿದ ಆರೋಪಿಗೆ ಉಡುಪಿಯ 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Advertisement

ಉಡುಪಿಯ ಮೀನು ಮಾರುಕಟ್ಟೆ ಬಳಿಯ ನಿವಾಸಿ ಬಿ.ಅಬ್ದುಲ್‌ ಹಮೀದ್‌ ಸಾಹೇಬ್‌ ಎಂಬವರು ಈ ಹಿಂದೆ ತೆಂಕ ಎರ್ಮಾಳು ನಿವಾಸಿ ಅಬ್ದುಲ್‌ ಸಮದ್‌ ಖಾನ್‌ ಎಂಬಾತನಿಗೆ ಆತ ಕೇಳಿದಂತೆ 3 ಲ.ರೂ. ನೀಡಿದ್ದರು. ಬಳಿಕ ಈ ಹಣವನ್ನು ಅಬ್ದುಲ್‌ ಸಮದ್‌ ಖಾನ್‌ ಚೆಕ್‌ ರೂಪದಲ್ಲಿ ಬಿ.ಅಬ್ದುಲ್‌ ಹಮೀದ್‌ ಸಾಹೇಬ್‌ಗ ನೀಡಿದ್ದರು.

ಇದನ್ನೂ ಓದಿ: ಡೀಸೆಲ್‌ ಅನಿರೀಕ್ಷಿತ ಲಾಭ ತೆರಿಗೆ ಇಳಿಕೆ: ಕಚ್ಚಾ ತೈಲ ಶುಲ್ಕ ಹೆಚ್ಚಳ

ಆದರೆ ಚೆಕ್‌ ಬೌನ್ಸ್‌ ಆಗಿದೆ ಎಂದು ಬಿ.ಅಬ್ದುಲ್‌ ಹಮೀದ್‌ ಸಾಹೇಬ್‌ ಅವರು ನ್ಯಾಯಾಲಯದಲ್ಲಿ ಜು.19ರಂದು ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 3 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ. ಫಿರ್ಯಾದುದಾರರ ಪರವಾಗಿ ನ್ಯಾಯವಾದಿ ಮಹಮ್ಮದ್‌ ಇಕ್ಬಾಲ್‌ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next