Advertisement

Manipal ತನಿಖೆಯ ನೆಪದಲ್ಲಿ ವಂಚನೆ: ಲಕ್ಷಾಂತರ ರೂ.ವರ್ಗಾವಣೆ

09:07 PM Nov 17, 2023 | Team Udayavani |

ಮಣಿಪಾಲ: ಆ್ಯಪ್‌ ಮೂಲಕ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ.ಹಣ ವರ್ಗಾಯಿಸಿಕೊಂಡ ಘಟನೆ ನಡೆದಿದೆ.

Advertisement

ಉಡುಪಿಯ ಕೊಂಪೆಲ್ಲ ಲಕ್ಷ್ಮೀನಾರಾಯಣ ಅವರಿಗೆ ಸ್ಕೈಪೇ ಆ್ಯಪ್‌ ಮೂಲಕ Mumbai.cbi.gov.in ವೆಬ್‌ಸೈಟ್‌ನಿಂದ ಸಂದೀಪ್‌ ಮತ್ತು ಆಕಾಶ್‌ ಕುಲ್ಹರಿ ಅವರು ವೀಡಿಯೋ ಕರೆ ಮಾಡಿ ಮಾತನಾಡಿ, ನೀವು ಲೇವಾದೇವಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ ಎಂದು ತಿಳಿಸಿದ್ದಾರೆ.

ಬಳಿಕ ತನಿಖೆಯ ನೆಪದಲ್ಲಿ ಬೆದರಿಸಿ ಲಕ್ಷ್ಮೀನಾರಾಯಣ್‌ ಅವರ ಬ್ಯಾಂಕ್‌ ಅಕೌಂಟ್‌ ಮಾಹಿತಿಯನ್ನು ಸ್ಕೈಪೇ ಆ್ಯಪ್‌ ಮೂಲಕ ಪಡೆದುಕೊಂಡು ಅವರ ಗಮನಕ್ಕೆ ಬಾರದೆ ಅವರ ಐಸಿಐಸಿಐ ಬ್ಯಾಂಕ್‌ ಖಾತೆಯಿಂದ 19,78,700 ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next