Advertisement

Fraud: ಯುವತಿಗೆ ವಂಚನೆ, ಬೆದರಿಕೆ; ಆರೋಪ

09:54 PM Feb 22, 2024 | Team Udayavani |

ಬ್ರಹ್ಮಾವರ: ಪ್ರೀತಿಯ ನೆಪದಲ್ಲಿ ಹೆಗ್ಗುಂಜೆ ಪಡುಬಾರಾಳಿಯ ಮಾಧವ ವಂಚಿಸಿರುವುದಾಗಿ ಬ್ರಹ್ಮಾವರದ ಯುವತಿ ದೂರು ನೀಡಿದ್ದಾರೆ.

Advertisement

ಆರೋಪಿ ಮಾಧವ ಮದುವೆಯಾಗುವುದಾಗಿ ನಂಬಿಸಿ ನನಗೆ ಸಾಲ ಇದೆ, ವಾಹನ ಖರೀದಿಸಲು ಇದೆ ಎಂದು ರೂ. 2,06,903 ಹಣವನ್ನು ಗೂಗಲ್‌ ಪೇ ಮೂಲಕ ಪಡೆದಿದ್ದನು. ಸುಮಾರು 80,000 ರೂ. ನಗದು, ಚಿನ್ನದ ಸರ ಮತ್ತು ಸಿಮ್‌ ಕಾರ್ಡ್‌ ಕೂಡ ಪಡೆದುಕೊಂಡಿದ್ದನು. ಇದುವರೆಗೆ ವಾಪಸ್‌ ನೀಡದೆ ವಂಚಿಸಿದ್ದಾನೆ. 2023ರ ಮೇ ತಿಂಗಳಲ್ಲಿ ಆರೋಪಿಯು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದರೂ ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದೂ ಹೇಳುತ್ತಿದ್ದು, ಮೆಸೇಜ್‌ ಮಾಡಿ ಬೆದರಿಕೆ ಹಾಕುತ್ತಿದ್ದ. ನಂಬರ್‌ ಬ್ಲಾಕ್‌ ಮಾಡಿದ ಅನಂತರವೂ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕಿಸಿ ನನ್ನ ವಿರುದ್ಧ ದೂರು ನೀಡಿದರೆ ಫೋಟೊವನ್ನು ಕಟೌಟ್‌ ಮಾಡಿ ಊರು ತುಂಬಾ ಹಾಕುತ್ತೇನೆ, ಮನೆಗೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾರೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next