Advertisement

ನೌಕರಿ ನೆಪದಲ್ಲಿ ವಂಚನೆ; ನಕಲಿ ಟಿಸಿ ಸೆರೆ

11:45 AM Dec 07, 2019 | Team Udayavani |

ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ನೌಕರಿಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಟಿಸಿಯನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಸುಣ್ಣದ ಗುಡ್ಡ, ಆಲಂಕಿ, ಹಿರೇನಗುಡಿಯ ಗಣೇಶ ಎನ್‌. ಹಳ್ಳೇರ ಎಂಬುವನೆ ಬಂಧಿತನಾಗಿದ್ದಾನೆ.

Advertisement

ರೈಲ್ವೆ ಇಲಾಖೆಯ ನಕಲಿ ಐಡಿ ಕಾರ್ಡ್‌ ಹೊಂದಿದ್ದ ಈತ ನಿರುದ್ಯೋಗಿ ಯುವಕ, ಯುವತಿಯರಿಗೆ ಕೊಂಕಣ ರೈಲ್ವೆ ಕಾರ್ಪೊರೇಶನ್‌ದಲ್ಲಿ ಮತ್ತು ನೈಋತ್ಯ ರೈಲ್ವೆಯಲ್ಲಿ ಗ್ರುಪ್‌ ಸಿ ಮತ್ತು ಡಿ ಹಾಗೂ ವಿವಿಧ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಮುಂಗಡವಾಗಿ 10-15ಸಾವಿರ ರೂ. ಇಸಿದುಕೊಂಡು, ನಂತರ ತನ್‌ ಮೊಬೈಲ್‌ ಸ್ವೀಚ್‌ ಆಫ್‌ ಮಾಡುತ್ತಿದ್ದ. ಅಲ್ಲದೆ ಕೊಂಕಣ ರೈಲ್ವೆಯ ನಕಲಿ ಸೀಲ್‌ ಉಪಯೋಗಿಸಿ ಯುವಕ, ಯುವತಿಯರಿಗೆ ನಕಲಿ ನೇಮಕಾತಿ ಆದೇಶ ಪತ್ರ ನೀಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯ ಡಿವೈಎಸ್‌ಪಿ ಬಿ.ಬಿ. ಪಾಟೀಲ, ಸಿಪಿಐ ಜೆ.ಎಂ. ಕಾಲಿಮಿರ್ಚಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಾಲಂ ಹುಸೇನ್‌, ಆರ್‌ಪಿಎಫ್‌ ಇನ್‌ ಸ್ಪೆಕ್ಟರ್‌ ಸಂಜಯ ಕಾರೆಕರ ನೇತೃತ್ವದಲ್ಲಿ ಸಿಬ್ಬಂದಿಯು ಶುಕ್ರವಾರ ಕಾರ್ಯಾಚರಣೆ ನಡೆಸಿ, ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಟಿಸಿ ಎಂದು ತಿರುಗಾಡುತ್ತಿದ್ದ ಗಣೇಶನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತನು ನೌಕರಿ ಕೊಡಿಸುವುದಾಗಿ ರಾಜ್ಯದ ವಿವಿಧ ಪ್ರದೇಶಗಳ ಸುಮಾರು 20ಕ್ಕೂ ಅಧಿಕ ನಿರುದ್ಯೋಗಿಗಳಿಂದ ಹಣ ವಸೂಲಿ ಮಾಡಿದ್ದ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next