Advertisement

Udupi: ಮುದ್ರಾ ಲೋನ್‌ ನೆಪದಲ್ಲಿ ಲಕ್ಷಾಂತರ ರೂ.ವಂಚನೆ

09:49 PM Feb 07, 2024 | Team Udayavani |

ಉಡುಪಿ: ಮುದ್ರಾ ಲೋನ್‌ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

Advertisement

ಮುದ್ರಾ ಯೋಜನೆಯಡಿ ಸಾಲ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತನ್ನು ಉಡುಪಿಯ ಮಹಿಳೆಯೊಬ್ಬರು ನಂಬಿದ್ದಾರೆ. ಆ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯು ತಾನು ಮುದ್ರಾ ಲೋನ್‌ ಕೊಡಿಸುವ ಏಜೆಂಟ್‌ ಎಂದು ನಂಬಿಸಿದ್ದಾರೆ. ಬಳಿಕ ಮಹಿಳೆಯಿಂದ ಲೋನ್‌ಗೆ ಸಂಬಂಧಿಸಿ ದಾಖಲೆ ಪಡೆದು, ರಿಜಿಸ್ಟ್ರೇಶನ್‌ ಶುಲ್ಕ 18,786 ರೂ.ಜಮೆ ಮಾಡುವಂತೆ ಗೂಗಲ್‌ ಪೇ ಐಡಿಯನ್ನು ನೀಡಿದ್ದು, ಆ ಗೂಗಲ್‌ ಪೇ ಐಡಿಗೆ ಮಹಿಳೆ ಹಣ ಜಮೆ ಮಾಡಿದ್ದಾರೆ. ಬಳಿಕ ಎನ್‌ಒಸಿ ಹಾಗೂ ಇತರ ಖರ್ಚುಗಳಿಗೆ ಹಣ ಕಟ್ಟುವಂತೆ ತಿಳಿಸಿ ಆರೋಪಿ ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಡಿ.21ರಿಂದ ಫೆ.3ರ ವರೆಗೆ ಹಂತ ಹಂತವಾಗಿ ಒಟ್ಟು 9,15,450 ರೂ.ಗಳನ್ನು ಪಾವತಿಸಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next