Advertisement

ಕಾರು ಗೆದ್ದಿರುವುದಾಗಿ ಹೇಳಿ 60 ಸಾವಿರ ರೂ. ವಂಚನೆ

01:12 PM Sep 21, 2022 | Team Udayavani |

ಬೆಂಗಳೂರು: ಮಹೀಂದ್ರಾ ಕಾರು ಗೆದ್ದಿರುವುದಾಗಿ ಟೆಕ್ನಿಷಿಯನ್‌ಗೆ ಪೋಸ್ಟ್‌ ಲೆಟರ್‌ಕಳುಹಿಸಿದ ಸೈಬರ್‌ ಕಳ್ಳರು 59,200 ರೂ. ಲಪಟಾಯಿಸಿದ್ದಾರೆ.

Advertisement

ಮೈಸೂರು ರಸ್ತೆಯ ಸುನೀಲ್‌ (21) ವಂಚನೆಗೊಳಗಾದ ಯುವಕ.  ಸುನೀಲ್‌ ಕಂಪನಿಯೊಂದರಲ್ಲಿ ಟೆಕ್ನಿಷಿಯನ್‌ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ನೆಪಾrಲ್‌ ಆನ್‌ಲೈನ್‌ ಶಾಂಪಿಂಗ್‌ ಪ್ರೈ.ಲಿ. ಎಂಬ ಹೆಸರಿನಿಂದ ಮಹೀಂದ್ರಾ ಕಾರು ಗೆದ್ದಿರುವುದಾಗಿ ಸುನೀಲ್‌ಗೆ ಪೋಸ್ಟ್‌ ಲೆಟರ್‌ ಬಂದಿತ್ತು. ಇದನ್ನು ನಂಬಿದ ಸುನೀಲ್‌ ಅದರಲ್ಲಿದ್ದ ನಂಬರ್‌ಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ, ಪರಿಚಿತ ವ್ಯಕ್ತಿಯೊಬ್ಬ ನೀವು ಮಹೀಂದ್ರಾ ಕಾರು ಗೆದ್ದಿದ್ದೀರಿ ಎಂದು ಹೇಳಿದ್ದ. ಆದರೆ, ಕಾರು ಪಡೆಯಲು ನಿರಾಕರಿಸಿದ ಸುನೀಲ್‌ ಕಾರಿನ ಮೌಲ್ಯದ ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದ.

ಇದಕ್ಕೆ ಒಪ್ಪಿದ ಅಪರಿಚಿತ ವ್ಯಕ್ತಿ ವೆರಿಫಿಕೇಶನ್‌ ಮಾಡುವ ನೆಪದಲ್ಲಿ ಸುನೀಲ್‌ನ ಆಧಾರ್‌, ಪ್ಯಾನ್‌ ಕಾರ್ಡ್‌ನ ಫೋಟೋ ಪಡೆದು ನಂಬಿಕೆ ಗಿಟ್ಟಿಸಿ ಕೊಂಡಿದ್ದ. ನಂತರ ನಂತರ ಟಿಡಿಎಸ್‌ ಚಾರ್ಜ್‌ ಪಾವತಿಸ ಬೇಕೆಂದು ಸುನೀಲ್‌ನಿಂದ ಹಂತ-ಹಂತವಾಗಿ ತನ್ನ ಬ್ಯಾಂಕ್‌ ಖಾತೆಗೆ ಅಪರಿಚಿತ ವ್ಯಕ್ತಿ 59,200 ರೂ. ಜಮೆ ಮಾಡಿಸಿಕೊಂಡಿದ್ದ. ನಂತರ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next