Advertisement

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

09:01 PM Dec 09, 2022 | Team Udayavani |

ಮಂಗಳೂರು: ಗುತ್ತಿಗೆದಾರನೋರ್ವರಿಗೆ ಕಾಮಗಾರಿಯ ಹಣ ನೀಡದೆ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ದಿನೇಶ ಕೆ.ವಿ. ಅವರು ಮನೆ ಕಟ್ಟುವ ಗುತ್ತಿಗೆದಾರರಾಗಿದ್ದು, ಅವರಿಂದ ಮನೆ ಕಟ್ಟಿಸಿಕೊಂಡ 8 ಮಂದಿ ಕಾಮಗಾರಿಯ ಹಣವನ್ನು ಸರಿಯಾಗಿ ನೀಡುತ್ತಿರಲಿಲ್ಲ. ಇದರಿಂದ ದಿನೇಶ ಅವರು ಮಾನಸಿಕ ಖನ್ನತೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಅವರಿಗೆ ಬರಬೇಕಾದ ಹಣದ ಬಗ್ಗೆ ಡೈರಿಯಲ್ಲಿ ನಮೂದಿಸಿರುವುದನ್ನು ತಿಳಿಸಿದ್ದರು. ಹಣ ನೀಡದೆ ಮೋಸ ಮಾಡಿರುವ ಆಘಾತದಿಂದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಡೈರಿಯಲ್ಲಿ ನಮೂದಿಸಿದ್ದ ಮೊಬೈಲ್‌ ನಂಬರ್‌ಗಳಿಗೆ ಕರೆ ಮಾಡಿ ಬಾಕಿ ಹಣ ನೀಡುವಂತೆ ಕೇಳಿದಾಗ ಅವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ. ಬಾಕಿ ಹಣ ನೀಡದೆ ವಂಚಿಸಿದ್ದಾರೆ ಎಂದು ದಿನೇಶ ಅವರ ಪತ್ನಿ ಮಂಗಳೂರು ಪೂರ್ವ ಠಾಣೆಗೆ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next