Advertisement

ATM Fraud: ಎಟಿಎಂ ಬಳಸಲು ಸಹಾಯ ಮಾಡಿದಾತನಿಂದ ವಂಚನೆ!

12:11 PM Mar 16, 2024 | Team Udayavani |

ಬೆಳ್ತಂಗಡಿ: ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡಿದ ವ್ಯಕ್ತಿಯೊಬ್ಬ ಬಳಿಕ ಅವರ ಖಾತೆಯಿಂದ 1 ಲಕ್ಷಕ್ಕೂ ಅಧಿಕ ಹಣ ತೆಗೆದು ವಂಚಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

Advertisement

ಎಟಿಎಂ ಬಳಕೆ ಗೊತ್ತಿಲ್ಲದ ಮೇಲಂತಬೆಟ್ಟು ಗ್ರಾಮದ ಶರೀಫ್‌ (53) ಅವರು ಜ. 11ರಂದು ಎಟಿಎಂನಿಂದ ಹಣ ಪಡೆಯಲು ಅಪರಿಚಿತ ವ್ಯಕ್ತಿಯೊಬ್ಬನ ಸಹಾಯ ಬಯಸಿ ಕಾರ್ಡ್‌, ಪಿನ್‌ ನಂಬರ್‌ ಇತ್ಯಾದಿ ವಿವರಗಳನ್ನು ಆತನಿಗೆ ನೀಡಿದರು. ಆತ ಅವರು ಹೇಳಿದಷ್ಟು (3 ಸಾವಿರ ರೂ.) ಹಣ ತೆಗೆದುಕೊಟ್ಟ ಬಳಿಕ ಬೇರೆ ಯಾವುದೋ ಕಾರ್ಡನ್ನು ಮರಳಿಸಿದ್ದ.

ಆ ವಿಷಯ ಅರಿಯದ ಅವರು ಹಣ, ಕಾರ್ಡ್‌ ಪಡೆದು ಮರಳಿದ್ದರು. ಮೂರು ದಿನಗಳ ಅನಂತರ ಅವರ ಖಾತೆಯಿಂದ 1,05,300 ರೂ. ಕಡಿತವಾಯಿತು. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಲು ತೆರಳಿದಾಗ ಎಟಿಎಂನಲ್ಲಿ ನೆರವು ನೀಡಿದ ವ್ಯಕ್ತಿ ಬೇರೊಂದು ಎಟಿಎಂ ಕಾರ್ಡನ್ನು ನೀಡಿರುವುದು ಅರಿವಿಗೆ ಬಂತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next