Advertisement

Manipal: ಬ್ಯಾಂಕ್‌ ವಿವರ ಪಡೆದು ವಂಚನೆ

08:31 PM Aug 06, 2024 | Team Udayavani |

ಮಣಿಪಾಲ: ಬ್ಯಾಂಕ್‌ನ ಕಸ್ಟಮರ್‌ ಕೇರ್‌ ಎಂದು ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂ. ವನ್ನು ವರ್ಗಾವಣೆ ಮಾಡಿರುವ ಘಟನೆಯೊಂದು ಮಂಗಳವಾರ (ಆ.6) ನಡಡೆದಿದೆ.

Advertisement

ಮಣಿಪಾಲದ ಶೇಖ್‌ ಅಬ್ದುಲ್‌ ಖಾದರ್‌ ಅವರು ಅಮೆಜಾನ್‌ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದು, ಆ.5ರಂದು ಅವರ ಮೊಬೈಲ್‌ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಐಸಿಐಸಿಐ ಬ್ಯಾಂಕ್‌ ಕಸ್ಟಮರ್‌ ಕೇರ್‌ ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ. ನಂತರ “ನಿಮ್ಮ ಕಾರ್ಡ್‌ ಬದಲಾವಣೆ ಮಾಡಲಿಕ್ಕಿದೆ’ ಎಂದು ಮಾಹಿತಿ ಪಡೆದುಕೊಂಡ ಸ್ವಲ್ಪ ಸಮಯದಲ್ಲೇ ಕ್ರೆಡಿಟ್‌ ಕಾರ್ಡ್‌ನಿಂದ 51,180 ರೂ. ಮತ್ತೂಂದು ಅಕೌಂಟ್‌ಗೆ ವರ್ಗಾವಣೆಯಾಗಿದೆ. ಸದ್ಯ ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿರಾರು ರೂ. ವರ್ಗಾವಣೆ

ಹೆರ್ಗದ ಸುಕೇಶ್‌ ಎಂಬುವವರಿಗೆ ಎಸ್‌ಬಿಐ ಹೆಸರಿನಲ್ಲಿ ಕರೆ ಮಾಡಿ ಲಿಂಕ್ ಕಳಿಸುವುದಾಗಿ ತಿಳಿಸಿದ್ದಾರೆ.  ಲಿಂಕ್‌ ಕ್ಲಿಕ್ಕಿಸಿ ಸಾವಿರಾರು ರೂ. ಕಳೆದುಕೊಂಡ ಘಟನೆ ಮಂಗಳವಾರ (ಆ.6) ನಡೆದಿದೆ.
ಕರೆ ಮಾಡಿ ಲಿಂಕ್‌ ಕ್ಲಿಕ್‌ ಮಾಡಿದರೆ  9,657 ರೂ.  ಬಹುಮಾನ ದೊರೆಯುವುದಾಗಿ ತಿಳಿಸಿದ್ಅದಾರೆ. ಸುಕೇಶ ಅವರು ಲಿಂಕ್‌ ಓಪನ್‌ ಮಾಡಿದ ಕೂಡಲೇ ಅವರ ಖಾತೆಯಲ್ಲಿದ್ದ 99,850 ರೂ. ಹಣ ವರ್ಗಾವಣೆಯಾಗಿದೆ. ಸದ್ಯ ಈ ಕುರಿತಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next