Advertisement

Fraud: ಗ್ರಾಹಕನಿಂದ ಹೆಚ್ಚುವರಿ ಹಣ ಪಡೆದು ಕ್ಯಾಬ್‌ ಚಾಲಕನಿಂದ ವಂಚನೆ: ದೂರು

11:48 AM Feb 15, 2024 | Team Udayavani |

ಬೆಂಗಳೂರು: ಕ್ಯಾಬ್‌ ಚಾಲಕನೊಬ್ಬ ಗ್ರಾಹಕನಿಂದ ಸಾವಿರಾರು ರೂ. ಪ್ರಯಾಣ ದರ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಹಕರೊಬ್ಬರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ಕ್ಯಾಬ್‌ ಚಾಲಕ ಭರತ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಜ.5ರಂದು ಸ್ನೇಹಿತರನ್ನು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಡ್ರಾಪ್‌ ಮಾಡಿ, ಬಳಿಕ ಬೆಂಗಳೂರಿನ ತಾವರೆಕೆರೆಯ ಮನೆಗೆ ಹೋಗಲು ದೂರುದಾರ ಕ್ಯಾಬ್‌ ಬುಕ್‌ ಮಾಡಿದ್ದಾನೆ. ಈ ವೇಳೆ ಏರ್‌ಪೋರ್ಟ್‌ ಬಳಿ ನಿಂತಿದ್ದ ಆರೋಪಿ ಭರತ್‌ ತಾನೇ ಊಬರ್‌ ಕ್ಯಾಬ್‌ ಚಾಲಕ ಎಂದು ಹೇಳಿ, ದೂರುದಾರರನ್ನು ಕ್ಯಾಬ್‌ನಲ್ಲಿ ಕೂರಿಸಿಕೊಂಡಿದ್ದಾನೆ. ತಾವರೆಕೆರೆಯ ಅಪಾರ್ಟ್‌ಮೆಂಟ್‌ ಬಳಿ ಡ್ರಾಪ್‌ ಮಾಡಿದ್ದಾನೆ. ಈ ವೇಳೆ ಊಬರ್‌ ಅಪ್ಲಿಕೇಷನ್‌ಲ್ಲಿ 914 ರೂ. ತೋರಿಸಿದ್ದು, ಅದನ್ನು ಚಾಲಕನಿಗೆ ಕೊಡಲು ದೂರುದಾರ ಮುಂದಾಗಿದ್ದಾರೆ.

ಆದರೆ, ಕ್ಯಾಬ್‌ ಚಾಲಕ ಭರತ್‌, ತನ್ನ ಮೊಬೈಲ್‌ನಲ್ಲಿ 5,194 ರೂ. ತೋರಿಸುತ್ತಿದೆ, ಅಷ್ಟೇ ಕೊಡಬೇಕೆಂದು 5,194 ರೂ. ಪಡೆದುಕೊಂಡಿದ್ದಾನೆ. ಈ ನಂತರ ಊಬರ್‌ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಏರ್‌ ಪೋರ್ಟ್‌ನಿಂದ ತಾವರೆಕೆರೆ ಅಷ್ಟೊಂದು ಮೊತ್ತ ಆಗುವುದಿಲ್ಲ ಎಂದು ತಿಳಿದು, ವಂಚಿಸಿದ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಇದೀಗ ದೂರು ನೀಡಿದ್ದಾರೆ. ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next