Advertisement

Part time job ವಂಚನೆ ಆರೋಪಿ ರಾಜಸ್ಥಾನದಲ್ಲಿ ವಶಕ್ಕೆ

12:21 AM Mar 25, 2024 | Team Udayavani |

ಮಂಗಳೂರು: ಪಾರ್ಟ್‌ ಟೈಮ್‌ ಜಾಬ್‌ ಇರುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಲಿಂಕ್‌ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್‌ ಮಾಡುವ ಹಣ ಮಾಡಬಹುದು ಎಂದು ನಂಬಿಸಿ ಒಟ್ಟು 1,15,000 ರೂ. ವರ್ಗಾಯಿಸಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೆನ್‌ ಠಾಣೆಯ ಪೊಲೀಸರು ರಾಜಸ್ಥಾನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಜೋಧಪುರ ಜಿಲ್ಲೆಯ ಮುಸಲ್ಮಾನ್‌ ಕಾ ಬಾವುರಿ ರಾಮ್‌ ದೇವ್‌ ಮಂದಿರ ಹತ್ತಿರ ಬಾವುರಿ ಗ್ರಾಮದ ಸದ್ದಾಂ ಗೌರಿ ಯಾನೆ ಬಾವುರಿ (30) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್‌ ಫೋನ್‌, 8 ಡೆಬಿಟ್‌ ಕಾರ್ಡ್‌, 4 ಬ್ಯಾಂಕ್‌ ಚೆಕ್‌ ಬುಕ್‌ ಗಳು, ಆಧಾರ್‌ಕಾರ್ಡ್‌, ಪಾನ್‌ ಕಾರ್ಡ್‌ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಹಾಗೂ ಡಿಸಿಪಿ ಸಿದ್ದಾರ್ಥ ಗೋಯಲ್‌ ಮಾರ್ಗದರ್ಶನದಂತೆ ಸಿಸಿಆರ್‌ಬಿ ಘಟಕದ ಎಸಿಪಿ ರವೀಶ್‌ ನಾಯಕ್‌ ನೇತೃತ್ವದಲ್ಲಿ ಮಂಗಳೂರು ನಗರ ಸೆನ್‌ ಕ್ರೈಂ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಶ್ಯಾಮಸುಂದರ್‌ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next