Advertisement

ಹದಿನಾಲ್ಕು ಮಾಸಗಳ ಮಾಸದ ಹೆಜ್ಜೆ…

10:45 PM Jul 23, 2019 | Team Udayavani |

* 2018ರ ಮೇ 15ರಂದು ವಿಧಾನಸಭೆ ಫ‌ಲಿತಾಂಶ.

Advertisement

* ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. (ಬಿಜೆಪಿ-104, ಕಾಂಗ್ರೆಸ್‌-78, ಜೆಡಿಎಸ್‌-38 ಹಾಗೂ ಪಕ್ಷೇತರ-2).

* ನಂತರ ಜಯನಗರ ಹಾಗೂ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ.

* 2018ರ ಮೇ 15ರ ಸಂಜೆಯೇ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಂದ ರಾಜ್ಯಪಾಲರ ಭೇಟಿ.

* ಅಂದೇ ರಾತ್ರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್‌-ಜೆಡಿಎಸ್‌, ಬಿಎಸ್‌ವೈ ಪ್ರಮಾಣವಚನಕ್ಕೆ ತಡೆ ನೀಡಲು ಮನವಿ- ತಡೆ ನೀಡಿದ ಸುಪ್ರೀಂ ಕೋರ್ಟ್‌.

Advertisement

* ಮೇ 15ರ ರಾತ್ರಿ 9.45ಕ್ಕೆ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲ ವಿ.ಆರ್‌.ವಾಲಾ.

* ಮೇ 17ರ ಬೆಳಗ್ಗೆ 9ಕ್ಕೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ.

* ಮೇ 19ರ ಸಂಜೆ 4 ಗಂಟೆಯೊಳಗೆ ವಿಶ್ವಾಸ ಮತ ಸಾಬೀತು ಮಾಡುವಂತೆ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್‌ ಸೂಚನೆ, ಬಹುಮತ ಸಾಬೀತು ಮಾಡದೇ ರಾಜೀನಾಮೆ ನೀಡಿ ಹೊರ ನಡೆದ ಬಿ.ಎಸ್‌.ಯಡಿಯೂರಪ್ಪ ಮತ್ತು ತಂಡ.

* ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಗಾಗಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ ಕಾಂಗ್ರೆಸ್‌ ನಾಯಕರು.

* ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿಯವರಿಂದ ಮೇ 23ರ ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕಾರ. ದೇಶದ ವಿವಿಧ ಪಕ್ಷಗಳ ನಾಯಕರು ಭಾಗಿ.

* ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯಿಂದ ಕರಾಳದಿನಾಚರಣೆ.

* ಮೇ 25ರಂದು ವಿಶ್ವಾಸಮತ ಸಾಬೀತು ಮಾಡಿದ ಎಚ್‌.ಡಿ.ಕುಮಾರಸ್ವಾಮಿ.

* ಜೂನ್‌ 25ರಂದು ಬಿ.ಎಸ್‌.ಯಡಿಯೂರಪ್ಪ ದಿಢೀರ್‌ ಗುಜರಾತ್‌ಗೆ ಭೇಟಿ ನೀಡಿ, ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಿದರು.

* ಮೇ 29ರಂದು ಬಿಜೆಪಿಯಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಆಹ್ವಾನ.

* ಜುಲೈ 5ರಂದು ಮೈತ್ರಿ ಸರ್ಕಾರದ ಮೊದಲ ಬಜೆಟ್‌ ಮಂಡನೆ.

* ನವೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ.

* ಬಿಜೆಪಿ ಸರ್ಕಾರ ರಚನೆಗೆ ಸತತ ಪ್ರಯತ್ನ. ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಲು ಮುಂದಾದ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಮತ್ತು ತಂಡ, ಮುಂಬೈ ಸೇರಿದ ನಾಲ್ವರು ಅತೃಪ್ತ ಶಾಸಕರು.

* ಜನವರಿಯಲ್ಲಿ ಕಾಂಗ್ರೆಸ್‌ ಶಾಸಕರು ರಾಮನಗರದ ಈಗಲ್‌ಟನ್‌ ರೆಸಾರ್ಟ್‌ಗೆ ಶಿಫ್ಟ್ ಮತ್ತು ಮೈತ್ರಿ ಸರ್ಕಾರ ಉಳಿಸಲು ರಾಜ್ಯಕ್ಕೆ ಬಂದ ಅಹ್ಮದ್‌ ಪಟೇಲ್‌ ಹಾಗೂ ಗುಲಾಂ ನಬಿ ಆಜಾದ್‌.

* ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರ ಹೊಡೆದಾಟ.

* ಮತ್ತೇ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸಿದ ಬಿಜೆಪಿ.

* ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರ ರಚನೆಯ ವಿಫ‌ಲ ಯತ್ನ.

* ಮಾರ್ಚ್‌ನಿಂದ ಲೋಕಸಭಾ ಚುನಾವಣೆ ತಯಾರಿ.

* ಮೇ 23ರಂದು ಲೋಕಸಭಾ ಚುನಾವಣೆ ಫ‌ಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ.

* ರಾಜ್ಯ ಬಿಜೆಪಿಯಲ್ಲಿ ಹೆಚ್ಚಿದ ಸರ್ಕಾರ ರಚನೆಯ ಆಸಕ್ತಿ.

* ಮೈತ್ರಿ ಸರ್ಕಾರದ ಪಕ್ಷಕ್ಕೆ ಹೀನಾಯ ಸೋಲು. ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನ.

* ಮೈತ್ರಿ ಬಿಡುವಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರ ಬಹಿರಂಗ ಹೇಳಿಕೆ.

* ಬಿಕ್ಕಟಾದ ಮೈತ್ರಿ ಸರ್ಕಾರದ ಸಂಪುಟ ಪುನರ್‌ ರಚನೆ ಹಾಗೂ ವಿಸ್ತರಣೆ.

* ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್‌.ವಿಶ್ವನಾಥ್‌ ರಾಜೀನಾಮೆ.

* ಸ್ವತಂತ್ರ ಅಭ್ಯರ್ಥಿಗಳಿಂದ ಮತ್ತೆ ಮೈತ್ರಿ ಸರ್ಕಾರಕ್ಕೆ ಬೆಂಬಲ.

* ಸಂಪುಟ ವಿಸ್ತರಣೆ, ಸ್ವತಂತ್ರ ಅಭ್ಯರ್ಥಿಗಳಿಗೆ ಮತ್ತೆ ಮಂತ್ರಿಗಿರಿ.

* ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಲ್ಲಿ ಹೆಚ್ಚಿದ ಅಸಮಾಧಾನ.

* ಜುಲೈ 1ರಂದು ಶಾಸಕರಾದ ಆನಂದ್‌ ಸಿಂಗ್‌ ಹಾಗೂ ರಮೇಶ್‌ ಜಾರಕಿಹೋಳಿ ರಾಜೀನಾಮೆ.

* ಜುಲೈ 2ರಂದು “ರಿವರ್ಸ್‌ ಆಪರೇಷನ್‌’ಗೆ ಬಿಎಸ್‌ವೈ ಸವಾಲು.

* ಜುಲೈ 6ರಂದು 9 ಮಂದಿ ಅತೃಪ್ತ ಶಾಸಕರ ರಾಜೀನಾಮೆ.

* ಜುಲೈ 6ರಂದೇ ಮುಂಬೈಗೆ ಹಾರಿದ ಅತೃಪ್ತ ಶಾಸಕರು.

* ರಾಜೀನಾಮೆ ಅಂಗೀಕಾರಕ್ಕೆ ಕೋರಿ ಸುಪ್ರೀಂಗೆ ಅರ್ಜಿ.

* ಕ್ರಮಬದ್ಧವಾಗಿ ರಾಜೀನಾಮೆ ನೀಡಲು ಜುಲೈ 11ರಂದು ಓಡೋಡಿ ಬಂದ ಅತೃಪ್ತರು.

* ಜುಲೈ 12ರಿಂದ ಅಧಿವೇಶನ ಆರಂಭ.

* ವಿಶ್ವಾಸ ಮತ ನಿರ್ಣಯದ ಪ್ರಸ್ತಾಪ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ.

* ಜುಲೈ 12ರಿಂದ 23ರವರೆಗೂ ಮೈತ್ರಿ ಸರ್ಕಾರದ ಸಚಿವರು, ಶಾಸಕರಿಂದ ಸರ್ಕಾರದ ಸಾಧನೆ, ಬಿಜೆಪಿ ವಿರುದ್ಧ ಹಾಗೂ ಅತೃಪ್ತರ ವಿರುದ್ಧ ವಾಗ್ಧಾಳಿ.

* ಸದನದಲ್ಲಿ ತಾಳ್ಮೆ ಕಳೆದುಕೊಳ್ಳದ ಬಿಜೆಪಿ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next