Advertisement

ನಾಲ್ವರು ಯುವಕರು ನೀರುಪಾಲು

11:23 PM Mar 04, 2020 | Team Udayavani |

ಜೇವರ್ಗಿ/ಮಡಿಕೇರಿ: ರಾಜ್ಯದ ವಿವಿಧೆಡೆ ನೀರಿನಲ್ಲಿ ಮುಳುಗಿ ನಾಲ್ವರು ಯುವಕರು ಬುಧವಾರ ಮೃತಪಟ್ಟಿ ದ್ದಾರೆ. ಕಲಬು ರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಾಲಗಡ್ಲಾ ಬಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕರಿ ಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾಲೂಕಿನ ಹರನೂರ ಗ್ರಾಮದ ಬಸಣ್ಣ ಸಕ್ರೆಪ್ಪ (25) ಮತ್ತು ನಾಗಣ್ಣ ಸಕ್ರೆಪ್ಪ (18) ಮೃತ ಯುವಕರು.

Advertisement

ಹಾಲಗಡ್ಲಾ ಕೆರೆ ಬಳಿ ಯುವಕರ ಜಮೀನಿದ್ದು, ಕಳೆದ ಕೆಲ ದಿನಗಳಿಂದ ಕೆರೆಯಲ್ಲಿ ನಿತ್ಯ ಮೀನು ಹಿಡಿಯುತ್ತಿ ದ್ದರು. ಬುಧವಾರ ಮಧ್ಯಾಹ್ನ ಎಂದಿ ನಂತೆ ಮೀನು ಹಿಡಿ ಯಲು ಹೋದ ವೇಳೆ ಕಾಲು ಜಾರಿಬಿದ್ದು, ನೀರು ಪಾಲಾಗಿ ದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಯುವಕರ ಮೃತದೇಹವನ್ನು ಹೊರ ತೆಗೆದರು.

ವಿದ್ಯಾರ್ಥಿಗಳು ಮೃತ: ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಮಡಿಕೇರಿ ಸಮೀ ಪದ ದುಬಾರೆಯಲ್ಲಿ ನಡೆದಿದೆ. ಗೋಣಿಕೊಪ್ಪದ ಕಳತ್ಮಾಡು ಲಯನ್ಸ್‌ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್‌ ಮತ್ತು ಲೆನಿನ್‌ ಮೃತ ವಿದ್ಯಾರ್ಥಿಗಳು. ಶಾಲೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡದ 39 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪ್ರವಾಸ ಕ್ಕೆಂದು ದುಬಾರೆಗೆ ಆಗಮಿಸಿದ್ದರು. ಈ ಸಂದರ್ಭ ಶ್ರೇಯಸ್‌ ಮತ್ತು ಲೆನಿನ್‌ ಆಳ ವಾದ ಪ್ರದೇಶದಲ್ಲಿ ನೀರಿಗೆ ಇಳಿದಿದ್ದು, ಸೆಳೆತಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next