Advertisement
ಸಜೀಪಮೂಡದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶಗಳು ಹರಿದಾಡುತ್ತಿವೆ.
ಸಜೀಪಮೂಡ ಗ್ರಾ.ಪಂ. ಅನುದಾನದಲ್ಲಿ ಕಂದೂರಿನಲ್ಲಿ ಕೊಳವೆಬಾವಿ ತೋಡಲು ನಿರ್ಣಯಿಸಲಾಗಿತ್ತು. ನೀರು ಪರಿಶೋಧಕರು ಮೇಲ್ಭಾಗದಲ್ಲೇ ನೀರು ಸಿಗುವ ಖಾತರಿಯನ್ನೂ ನೀಡಿದ್ದರು. ನೇತ್ರಾವತಿ ನದಿಯಿಂದ ಮಂಗಳೂರಿನ ಕೊಣಾಜೆಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ಅದೇ ಜಾಗದಲ್ಲಿದ್ದು, ಅದನ್ನರಿಯದೆ ಶನಿವಾರ ಸಂಜೆ ಬಾವಿ ಕೊರೆಯಲಾರಂಭಿಸಲಾಯಿತು. ನಾಲ್ಕೈದು ಅಡಿ ಆಳದಲ್ಲಿರುವ ಕಬ್ಬಿಣದ ಪೈಪ್
ಲೈನ್ ತೂತಾಗಿ ನೀರು ಹರಿಯಲಾರಂಭಿಸಿತು. ಕೆಲಸಗಾರರು ಮತ್ತು ಸ್ಥಳದಲ್ಲಿದ್ದವರ ಸಂಭ್ರಮ ಮುಗಿಲು ಮುಟ್ಟಿತು. ವಿಷಯ ತಿಳಿದ ನೂರಾರು ಮಂದಿ ಜಮಾಯಿಸಿದರು. ಇಷ್ಟೆಲ್ಲ ಆಗುವಾಗ ನಿಜ ವಿಚಾರ ಗೊತ್ತಾಯಿತು. ನಿರಾಸೆಯ ನಡುವೆ ತಮಾಷೆ ವಸ್ತುವಾಗಿ ನಗುವಿಗೂ ಕಾರಣವಾಯಿತು. ಬಳಿಕ ಪೈಪ್ಲೈನ್ ಸರಿಪಡಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಯಿತು.
Related Articles
Advertisement