Advertisement
ಮಣ್ಣು ಜರಿದು ಬಿದ್ದುದರಿಂದ ದನದ ಹಟ್ಟಿ ಸಂಪೂರ್ಣ ನಾಶವಾಗಿದೆ. 1 ಹಾಲು ಕರೆಯುವ ಹಸು, 1 ಗಬ್ಬದ ಹಸು,1 ದೊಡ್ಡ ಗಡಸು ಹಾಗೂ 1 ಕರು ಮೃತಪಟ್ಟರೆ, 1 ದನವನ್ನುಸ್ಥಳೀಯರು ಮಣ್ಣಿನಡಿಯಿಂದ ಹೊರತೆಗೆದು ರಕ್ಷಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಮರ್ದಾಳದ ಯುವಕರು ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಸುಮಾರು ಒಂದೂವರೆ ತಾಸು ಕಾಲ ಜೆಸಿಬಿ ಯಂತ್ರ ಬಳಸಿ ಕಾರ್ಯಾಚರಣೆ ನಡೆಸಿ ದನಗಳ ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಯಿತು.ಘಟನೆಯಿಂದಾಗಿ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕಾರಿ ಡಾ| ಕಾರ್ತಿಕ್, ವಿಸ್ತರಣಾಧಿಕಾರಿ ಮಂಜುನಾಥ್, ಮರ್ದಾಳ ಗ್ರಾ.ಪಂ. ಅಧ್ಯಕ್ಷೆ ಲಲಿತಾ ರೈ ಮೈಕಾಜೆ ಮುಂತಾದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.