Advertisement

Karkala ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

09:36 PM Sep 02, 2023 | Team Udayavani |

ಕಾರ್ಕಳ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟವಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ 4 ಮಂದಿಯನ್ನು ವಶಕ್ಕೆ ಪಡೆದ ಘಟನೆ ಕಸಬಾ ಗ್ರಾಮದ ಕಾವೆರಡ್ಕ ಎಂಬಲ್ಲಿ ನಡೆದಿದೆ.

Advertisement

ಕಾರ್ಕಳ ನಗರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಸಂದೀಪ್‌ ಕುಮಾರ್‌ ಶೆಟ್ಟಿ ಹಾಗೂ ಸಿಬಂದಿ ಗಸ್ತು ಕರ್ತವ್ಯದಲ್ಲಿರುವಾಗ ದೊರೆತ ಮಾಹಿತಿ ಮೇರೆಗೆ ಕಸಬಾ ಗ್ರಾಮದ ಕಾವೆರಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಒಟ್ಟು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟವನ್ನು ಆಡುತ್ತಿದ್ದ ಸ್ಥಳಕ್ಕೆ ದಾಳಿಯನ್ನು ನಡೆಸಿದ್ದರು.

ಈ ವೇಳೆ ತೆಳ್ಳಾರು ನಿವಾಸಿ ವಿಜಯ್‌ ಕುಮಾರ್‌(38), ಪುಲ್ಕೇರಿ ನಿವಾಸಿ ಶಾಹಿದ್‌ ಪಿ.ಬಿ. (38), ಕುಂಬ್ರಪದವು ನಿವಾಸಿ ಸೋಮನಾಥ (30), ಕಸಬಾ ಗ್ರಾಮ ನಿವಾಸಿ ಸಂತೋಷ (38) ನನ್ನು ವಶಕ್ಕೆ ಪಡೆದಿದ್ದು ಅಪಾದಿತರಿಂದ ಜುಗಾರಿ ಆಟಕ್ಕೆ ಬಳಸಿದ 7,380 ರೂ. ನಗದು, ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next