Advertisement

ದಿ.ಮರೀಗೌಡರ ಕುಟುಂಬಕ್ಕೆ ಮಾಜಿ ಪ್ರಧಾನಿ ಸಾಂತ್ವನ

12:01 PM Sep 03, 2017 | Team Udayavani |

ಚನ್ನಪಟ್ಟಣ: ಇತ್ತೀಚಿಗೆ ನಿಧನರಾಗಿದ್ದ ತಾಲೂಕಿನ ಜೆಡಿಎಸ್‌ ಮುಖಂಡ ಇಗ್ಗಲೂರಿನ ಮರೀಗೌಡ ಹಾಗೂ ಹೊಡಿಕೆ ಹೊಸಹಳ್ಳಿಯ ಮತ್ತೂಬ್ಬ ಮುಖಂಡ ನಾಗಣ್ಣರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕುಟುಂಬಗಳಿಗೆ ಶನಿವಾರ ಭೇಟಿ ಸಾಂತ್ವನ ಹೇಳಿದರು.
ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್‌ ಮುಖಂಡ ದಿವಂಗತ ಮರೀಗೌಡ ನಿಧನರಾಗಿದ್ದರು. ಶನಿವಾರ ಅವರ ಉತ್ತರ ಕ್ರಿಯಾದಿ ಕಾರ್ಯಕ್ರಮ ಇತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಗೆ
ಭೇಟಿ ನೀಡಿದ ಜೆಡಿಎಸ್‌ ವರಿಷ್ಠ ಮರೀ ಗೌಡರ ಕುಟಂಬಕ್ಕೆ ಸಾಂತ್ವನ ಹೇಳಿದರು.

Advertisement

ನಂತರ ಮಾತನಾಡಿದ ಅವರು, ಮರೀಗೌಡ ತಾಲೂಕಿನ ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತರಾಗಿ ಪಕ್ಷದ ಸಂಘ ಟನೆಗೆ ಶ್ರಮಿಸಿದ್ದರು. ಜೊತೆಗೆ ತಾಪಂ ಸದಸ್ಯರಾಗಿದ್ದ ವೇಳೆ ತಮ್ಮ ವ್ಯಾಪ್ತಿಯ
ಅಭಿವೃದ್ಧಿಗೆ ಶ್ರಮಿಸಿದ್ದರು. ಇವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದರು. ಇದಕ್ಕೂ ಮುನ್ನ ಹೊಡಿಕೆಹೊಸಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಮುಖಂಡ
ಹೊಡಿಕೆಹೊಸಹಳ್ಳಿ ನಾಗಣ್ಣಗೌಡ ಅವರ ತಾಯಿ ಇತ್ತೀಚಿಗೆ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನಾಗಣ್ಣಗೌಡರ ಮನೆಗೆ ಭೇಟಿ ನೀಡಿದ ಎಚ್‌.ಡಿ.ದೇವೇಗೌಡ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅನಿತಾ ಭೇಟಿ: ಶನಿವಾರ ಬೆಳಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಾಲೂಕಿನ ಇಗ್ಗಲೂರು ಮತ್ತು ಹೊಡಿ ಕೆಹೊಸಹಳ್ಳಿ ಜೆಡಿಎಸ್‌ ಮುಖಂಡರ ಮನೆಗೆ ಭೇಟಿ ನೀಡಿ ತೆರಳಿದ ಬಳಿಕ
ಮಧ್ಯಾಹ್ನ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಕೂಡು ಎರಡು ಗ್ರಾಮಗಳಿಗೆ ತೆರಳಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಮುಖಂಡ ಎಂ.ಸಿ.ಕರಿಯಪ್ಪ, ಸಿಂ.ಲಿಂ.ನಾಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next