Advertisement

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

09:49 PM Dec 04, 2020 | mahesh |

ಧಾರವಾಡ : ಯೋಗೀಶಗೌಡ ಹತ್ಯೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶದ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ನಗರದ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಶುಕ್ರವಾರ ಸಮನ್ಸ್ ಹೊರಡಿಸಿದೆ.

Advertisement

ಸಿಬಿಐ ತಂಡ ತನಿಖೆ ಆರಂಭಿಸಿದಾಗ ಎಂಟು ಜನರು ಸಾಕ್ಷಿ ನಾಶ ಹಾಗೂ ಪ್ರಭಾವ ಬೀರಿದ್ದರು ಎನ್ನುವ ಅಂಶದ ಮೇಲೆ ಸಿಬಿಐನವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಅವರ ವಿರುದ್ಧ ಖಾಸಗಿ ದೂರು ದಾಖಲಿಸುವಂತೆ ಕೋರಿದ್ದರು. ಈ ವಿಚಾರಣೆ ಮಾಡಿದ ನ್ಯಾಯಾಲಯವು, ಮಾಜಿಸಚಿವ ವಿನಯ ಕುಲಕರ್ಣಿ, ಬಸವರಾಜ ಮುತ್ತಗಿ, ವಿಕಾಸ ಕಲಬುರ್ಗಿ, ಈರಣ್ಣ ಮಲ್ಲಿವಾಡ, ಬಸಯ್ಯ ಹಿರೇಮಠ, ಬಾಬು ಕಟಗಿ, ಅಮಿತ್ ದೊಡ್ಡಮನಿ ಹಾಗೂ ಲೋಗೇಂದ್ರ ಸಿ. ಎಂಬುವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಅವರಿಗೆ ಸಮನ್ಸ್ ಜಾರಿ ಹೊರಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next