Advertisement

ಮಾರುತಿ ಸುಜುಕಿಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌ ಖಟ್ಟರ್‌ ನಿಧನ

06:42 PM Apr 26, 2021 | Team Udayavani |

ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಗದೀಶ್‌ ಖಟ್ಟರ್‌ (78) ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement

ನಿವೃತ್ತ ಐಎಎಸ್‌ ಅಧಿಕಾರಿಯಾಗಿದ್ದ ಅವರು 1993ರಲ್ಲಿ ಮಾರುತಿ ಸುಜುಕಿಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿ ನೇಮಕಗೊಂಡಿದ್ದರು.

1999ರಲ್ಲಿ ಅವರು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕಗೊಂಡರು. 2007ರ ವರೆಗೆ ಆ ಹುದ್ದೆಯಲ್ಲಿ ನಿರ್ವಹಿಸಿ ನಿವೃತ್ತರಾದರು. ಬಳಿಕ ಅವರು ಕಾರ್ನೇಷನ್‌ ಅಟೋ ಇಂಡಿಯಾ ಎಂಬ ಕಂಪನಿ ಸ್ಥಾಪಿಸಿದ್ದರು. ಐಎಎಸ್‌ ಅಧಿಕಾರಿಯಾಗಿದ್ದ ಅವರು ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದರು.

ಇದನ್ನೂ ಓದಿ :ಕೆಂಪುಕೋಟೆ ಹಿಂಸೆ ಪ್ರಕರಣ : ನಟ ದೀಪ್‌ ಸಿಧುಗೆ ಜಾಮೀನು ಮಂಜೂರು

Advertisement

Udayavani is now on Telegram. Click here to join our channel and stay updated with the latest news.

Next