Advertisement

Forest ಸಮಸ್ಯೆ ಪರಿಹಾರಕ್ಕೆ ವಿಶೇಷ ತಂಡ ರಚಿಸಿ ಸರ್ವೇ: ಸಚಿವ ದಿನೇಶ್‌ ಗುಂಡೂರಾವ್‌

11:36 PM Jan 24, 2024 | Team Udayavani |

ಸುಳ್ಯ: ಜನತಾ ದರ್ಶನದಲ್ಲಿ ಕಂದಾಯ ಇಲಾಖೆ, ಅರಣ್ಯ, ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅಹವಾಲು ಸಲ್ಲಿಕೆಯಾಗಿದೆ.

Advertisement

ಸುಳ್ಯ ಎಂಬುದು ದೊಡ್ಡ ತಾಲೂಕು. ಇಲ್ಲಿ ಹಲವು ವರ್ಷಗಳಿಂದ ಸರ್ವೇಗಳನ್ನು ಮಾಡದೇ ಗೊಂದಲಮಯವಾಗಿದೆ. ಅರಣ್ಯ ಭೂಮಿ, ಸರಕಾರಿ ಭೂಮಿ ಗುರುತಿಸಲು ಪ್ರತ್ಯೇಕ ತಂಡ ರಚಿಸಿ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗು ವುದು ಎಂದು ದ.ಕ. ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಸುಳ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಭಿವೃದ್ಧಿಗೆ ಯಾವುದೇ ಬೇಧಭಾವ ಮಾಡದೇ ಸ್ಪಂದಿಸುತ್ತೇವೆ. ಜಿಲ್ಲೆಯ ತಾಲೂಕಿಗೆ ಕನಿಷ್ಠ 3 ತಿಂಗಳಿಗೊಮ್ಮೆ ಬೇಟಿ ನೀಡಿ ಜನರ ಅಹವಾಲು ಸ್ವೀಕರಿಸುತ್ತೇನೆ. ಅದರಲ್ಲೂ ಸುಳ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next