Advertisement

ಅರಣ್ಯ-ಕಂದಾಯ ಭೂಮಿ ಜಂಟಿ ಸಮೀಕ್ಷೆಗೆ ಸೂಚನೆ

12:17 AM Jun 14, 2019 | Sriram |

ಬೆಂಗಳೂರು: ಅರಣ್ಯ ಹಾಗೂ ಕಂದಾಯ ಜಮೀನುಗಳ ಗಡಿ ಗುರುತಿಸಲು ಎರಡೂ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಎರಡು ದಿನಗಳ ಪ್ರಾದೇಶಿಕ ಆಯು ಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯತ್‌ ಮುಖ್ಯಕಾರ್ಯನಿರ್ವಹಣಾ ಧಿಕಾರಿಗಳ ಸಮ್ಮೇಳನ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಹಾಗೂ ಕಂದಾಯ ಜಮೀನುಗಳನ್ನು ಗುರುತಿ ಸುವುದು ಸಾಕಷ್ಟು ಸಮಸ್ಯೆಯಾಗಿದ್ದು, ಎರಡೂ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯದ 17 ನದಿಗಳನ್ನು ಕಲುಷಿತ ಎಂದು ಘೋಷಣೆ ಮಾಡಿದೆ. ಅದನ್ನು ಶುದ್ಧೀಕ ರಿಸಲು ಕೊಳಚೆ ನಿರ್ಮೂಲನ ಘಟಕ ಸ್ಥಾಪನೆ ಮಾಡುವಂತೆ ಅಧಿಕಾರಿ ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು

ಬರ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲದ ಮಟ್ಟ ಏರಿಸುವುದು, ಜಲಸಂರಕ್ಷಣೆ ಮಾಡಲು ಜಾಗೃತಿ ಕಾರ್ಯಕ್ರಮ ಹಾಕಲು ಸೂಚನೆ ನೀಡಿದ್ದೇವೆ. ಮಳೆ ನೀರು ಸಂಗ್ರಹಣೆಗ ಆದ್ಯತೆ, ಉದ್ಯೋಗ ಖಾತ್ರಿ ಯೋಜನೆಯಡಿ ಇದಕ್ಕೆ ಉತ್ತೇಜನ ನೀಡಲು ಸೂಚನೆ ನೀಡಿದ್ದೇವೆ.

ಕುಡಿಯುವ ನೀರಿನ ಸಂಬಂಧ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ಹಲವು ನಿಬಂಧನೆ ಇದ್ದು, ಅದನ್ನು ಸಡಿಲ ಮಾಡಲು ತಿಳಿಸಿದ್ದೇವೆ. ಅನುದಾನ ಸದ್ಬಳಕೆ ಹಾಗೂ ಕಾಮಗಾರಿ ಪೂರ್ಣ ಗೊಳಿಸಲು ಸೂಚಿಸಿದ್ದು, ಕೊಳವೆ ಬಾವಿ ಕೊರೆಯುವುದು ಕೊನೆಯ ಅಸ್ತ್ರ ಆಗಬೇಕು ಎಂದು ಹೇಳಿದರು.

Advertisement

ಪ್ರತಿ ಜಿಲ್ಲೆಗಳಲ್ಲಿಯೂ ಟ್ಯಾಂಕರ್‌ನಲ್ಲಿ ನೀರು ಒದಗಿಸಲಾಗುತ್ತಿದೆ. ಟ್ಯಾಂಕರ್‌ಗಳಿಗೆ ಬಿಲ್ನೀಡಿಲ್ಲ ಎಂಬ ದೂರು ಬಂದಿತ್ತು. 15 ದಿನಗಳ ಒಳಗಾಗಿ ಅವರ ಬಾಕಿ ಪೂರ್ಣಗೊಳಿಸಿ ಎಂದು ಸೂಚಿಸಿದ್ದೇವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ಗ್ರಾಮಗಳಿಗೆ ಭೇಟಿ ಕೊಡಬೇಕು. ಬರ ಪರಿಹಾರ, ಅಲ್ಲಿನ ಕುಂದುಕೊರತೆ ಆಲಿಸಬೇಕು ಎಂದೂ ಸೂಚಿಸಿದ್ದೇವೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ 949 ಕೋಟಿ ರೂ. ಮುಂಗಾರು ಹಂಗಾಮಿಗೆ ಕೇಂದ್ರ ಮಂಜೂರು ಮಾಡಿದ್ದು, 650 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಬಾಕಿ ಹಣವನ್ನು ಕೆಲವೇ ದಿನದಲ್ಲಿ ರಾಜ್ಯ ಸರಕಾರ ಭರಿಸಲಿದೆ ಎಂದು ಹೇಳಿದರು.

ಹೋಬಳಿ ಮಟ್ಟದಲ್ಲಿ ಕಡ್ಡಾಯವಾಗಿ ಕಂದಾಯ ಹಾಗೂ ಪಿಂಚಣಿ ಅದಾಲತ್‌ ನಡೆಸಲು ಸೂಚನೆ ನೀಡಿದ್ದೇನೆ. ವಿಧವೆಯರು, ಹಿರಿಯರು ತಾಲೂಕು ಕಚೇರಿಗೆ ಬರುವುದನ್ನು ತಪ್ಪಿಸಿ, ಅಧಿಕಾರಿ ಗಳೇ ಅವರ ಮನೆಗೆ ತೆರಳಿ ಅವರಿಂದ ಸಂಬಂಧಪಟ್ಟ ದಾಖಲೆ ಪಡೆದು ಸರಕಾರದಿಂದ ನೀಡುವ ವೇತನವನ್ನು ನೀಡುವಂತೆ ಹೇಳಿದ್ದೇವೆ.

ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆ ತಡವಾಗುತ್ತಿದ್ದು, ತ್ವರಿತವಾಗಿ ವಿಲೇವಾರಿ ಆಗಬೇಕು. ಕೈಗಾರಿಕೆಗಳು ರಾಜ್ಯಕ್ಕೆ ಹೆಚ್ಚು ಬರುತ್ತಿವೆ. ಇವರಿಗೆ ಭೂಮಿ ನೀಡುವುದು ತಡವಾಗುತ್ತಿರುವು ದು ಗಮನಕ್ಕೆ ಬಂದಿದೆ. ಕೈಗಾರಿಕೆಗಳಿಗೆ ಭೂಮಿ ನೀಡಲು ಏಕಗವಾಕ್ಷಿಯ ಮೂಲಕ ಮಂಜೂರು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next