Advertisement

ಸುಳ್ಯ : ತೋಟಕ್ಕೆ ಕಾಡಾನೆ ದಾಳಿ ಲಕ್ಷಾಂತರ ರೂಪಾಯಿ ನಷ್ಟ

09:17 AM Aug 22, 2019 | Team Udayavani |

ಸುಳ್ಯ : ಆಲೆಟ್ಟಿ ಗ್ರಾಮದ ಏಣಾವರ ಮಾವಜಿ ಹಿಮಕರ ಅವರ ಸಮೃದ್ಧಿ ಫಾರ್ಮ್ಸ್ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು 250 ಬಾಳೆ ಗಿಡ, 15 ಅಡಿಕೆ ಮರ, 8 ತೆಂಗಿನ ಮರ, ರಬ್ಬರ್ ಗಿಡ, ಪೈಪ್ ಲೈನ್ ಗಳನ್ನು ಒಡೆದು ಹಾಕಿ ಅಪಾರ ಪ್ರಮಾಣದ ಬೆಳೆ‌ ನಾಶ ಮಾಡಿದೆ ಲಕ್ಷಾಂತರ ರೂ.ನಷ್ಟವಾಗಿದೆ.

Advertisement

ನಾರ್ಕೋಡು ತುದಿಯಡ್ಕ ಕೃಪಾಶಂಕರ ಅವರ ಅಡಿಕೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಅಲ್ಲಿದ್ದ ಕೃಷಿಯನ್ನು ನಾಶ ಮಾಡಿದೆ.
ಕೆಲವು ದಿನಗಳಿಂದ ಗ್ರಾಮದ ಹಲವು ಕಡೆಗಳಲ್ಲಿ ಕಾಡಾನೆಗಳು ಹಿಂಡು ಕೃಷಿ ತೋಟಕ್ಕೆ ನುಗ್ಗಿ ಹಾನಿ ಉಂಟು ಮಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next