Advertisement

ಕರಡಿ ಪ್ರತ್ಯಕ್ಷ : ಅಂಜನಾದ್ರಿ ಬೆಟ್ಟದ ಕೆಳಗೆ ಬೋನ್ ಇರಿಸಿದ ಅರಣ್ಯ ಇಲಾಖೆ

09:56 AM Oct 25, 2019 | Team Udayavani |

ಗಂಗಾವತಿ: ಅಂಜನಾದ್ರಿ ಬೆಟ್ಟದ ದೇಗುಲದ ಆವರಣದಲ್ಲಿ ಗುರುವಾರ ಬೆಳಗಿನ ಜಾವ ಕರಡಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗುರುವಾರ ಸಂಜೆ ಬೆಟ್ಟದ ಕೆಳಗೆ ಬೋನ್ ಇರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬ್ಯಾನರ್ ಅಳವಡಿಸಿದ್ದಾರೆ. ಕಳೆದ 15 ದಿನಗಳ ಹಿಂದೆ ಅಂಜನಾದ್ರಿ ಬೆಟ್ಟದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ದೇಗುಲ ಸಮಿತಿ ವತಿಯಿಂದ ಅರಣ್ಯ ಇಲಾಖೆಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಚಿಕ್ಕರಾಂಪೂರ ಜಂಗ್ಲಿ ಮಾರ್ಗದಲ್ಲಿ ಬೋನ್ ಇರಿಸಲಾಗಿತ್ತು. ಇದೀಗ ಬೋನಿನ ಜಾಗ ಬದಲಿಸಿ ಅಂಜನಾದ್ರಿ ಬೆಟ್ಟದ ಕೆಳಗೆ ಬೋನ್ ಇರಿಸಲಾಗಿದೆ.

Advertisement

ಕ್ರಮ: ಏಳು ಗುಡ್ಡದ ಪ್ರದೇಶವಾಗಿರುವ ಕಾರಣ ಇಲ್ಲಿ ಕರಡಿ ಚಿರತೆ ಕಂಡು ಬರುವುವುದು ಸಾಮಾನ್ಯ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಆದಷ್ಟು ರಾತ್ರಿ ವೇಳೆ ಬಾರದೇ ಹಗಲಿನಲ್ಲಿ ಬರುವುದು ಒಳ್ಳೆಯದು ಎಂದು ಇಲಾಖೆ ತಿಳಿಸಿದೆ. ಶೀಘ್ರ ಕರಡಿ ಚಿರತೆ ಬೋನ್ ಗೆ ಬಿಳುವ ಸಾಧ್ಯತೆ ಇದೆ ಎಂದು ಡಿವೈಆರ್ ಎಫ್ ರಾಮಣ್ಣ ಉದಯವಾಣಿಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next