Advertisement

ಬೆಳಗಾವಿ ಚಿರತೆ ಆಪರೇಷನ್‌ ಅಂತ್ಯ; ಬರಿಗೈಯಲ್ಲಿ ಮರಳಿದ ಅರಣ್ಯ ಇಲಾಖೆ, ಪೊಲೀಸ್‌ ಸಿಬಂದಿ

09:34 PM Sep 04, 2022 | Team Udayavani |

ಬೆಳಗಾವಿ: ಒಂದು ತಿಂಗಳಿನಿಂದ ನಗರದಲ್ಲಿ ಬೀಡು ಬಿಟ್ಟಿದ್ದ ಚಿರತೆ ಕೊನೆಗೂ ಸೆರೆಯಾಗಲೇ ಇಲ್ಲ. 250ಕ್ಕೂ ಹೆಚ್ಚು ಸಿಬಂದಿ ಏಕಕಾಲಕ್ಕೆ ಗಾಲ್ಫ್ ಕೋರ್ಸ್‌ ಪೊದೆಯೊಳಗೆ ಚಿರತೆಯನ್ನು ಹುಡುಕಾಡಿ ಕಾರ್ಯಾಚರಣೆ ಅಂತ್ಯಗೊಳಿಸಿದರು.

Advertisement

ಇಲ್ಲಿನ ಜಾಧವ ನಗರದಲ್ಲಿ ಆ.5ರಂದು ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಕಣ್ಣಾಮುಚ್ಚಾಲೆ ಆಟವಾಡಿದ್ದ ಚಿರತೆಯ ಶೋಧಕ್ಕೆ ಹಲವು ಕಾರ್ಯಾಚರಣೆ ನಡೆಸಲಾಗಿತ್ತು.

ಒಂದೆರಡು ಬಾರಿ ಎಲ್ಲರ ಕಣ್ಣೆದುರೇ ಓಡಿ ಹೋಗಿ ತಪ್ಪಿಸಿಕೊಂಡಿದ್ದ ಚಿರತೆ ಕೆಲವು ದಿನಗಳಿಂದ ಕಂಡುಬಂದಿಲ್ಲ. ಆದಕಾರಣ ಚಿರತೆ ಅರಣ್ಯಕ್ಕೆ ಹೋಗಿದೆ ಎಂಬ ನಿರ್ಧಾರಕ್ಕೆ ಬಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next