Advertisement

ಪಕ್ಷೇತರರಾಗಿ ಪೂಜಾರಿ ಸ್ಪರ್ಧಿಸುವಂತೆ ಒತ್ತಾಯ

11:53 AM Nov 18, 2019 | Suhan S |

ಗೋಕಾಕ: ಅಶೋಕ ಪೂಜಾರಿ ಉಪ ಚುನಾವಣೆಗೆ ಪಕ್ಷೇತರರಾಗಿ ಸ್ವರ್ಧಿಸುವಂತೆ ಒತ್ತಾಯಿಸಿ ಅಶೋಕ ಪೂಜಾರಿ ಮನೆ ಎದುರು ಅವರ ಬೆಂಬಲಿಗರು ರವಿವಾರ ಪ್ರತಿಭಟನೆ ನಡೆಸಿದರು.

Advertisement

ನಿನ್ನೆಯಷ್ಟೇ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ರಮೇಶ್‌ ಜಾರಕಿಹೊಳಿ ಅಶೋಕ್‌ ಪೂಜಾರಿ ಮನೆಗೆ ಭೇಟಿ ನಂತರ ರವಿವಾರ ಅಶೋಕ ಪೂಜಾರಿ ಚುನಾವಣೆಗೆ ಸ್ವ ರ್ಧಿಸುವಂತೆ ಅವರು ಮನೆ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಅಶೋಕ ಪೂಜಾರಿ ಅವರು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದೂ. ಸ್ವತಂತ್ರವಾಗಿ ಅಥವಾ ಯಾವುದಾದರೂ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧೆ ಮಾಡಬೇಕು ಯಾವುದೇ ಕಾರಣಕ್ಕೂ ಚುಣಾವಣಾ ಕಣದಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲ್ವಾನ್‌, ನ್ಯಾಯವಾದಿ ಎಂ.ಎ. ಪೀರಜಾದೆ, ಕಲ್ಲಯ್ಯ ಮಠಪತಿ, ಈರಣ್ಣ ಹಿರೇಮಠ, ಬಿಲಾಲ ಕಲ್ಲೋಳಿ, ಚಂದ್ರಶೇಖರ ಬಬಲಿ, ಗುರು ಬೆನವಾಡ, ಅನೀಲ ಸಂಕಾವಿ, ನಾಗು ದೇಸಾಯಿ, ಮಂಜುನಾಥ ಪಾಟೀಲ, ರವಿ ಮಡಿವಾಳ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next