Advertisement

ತ್ಯಾಜ್ಯ ವಿಲೇವಾರಿಗೆ ಇನ್ನಂಜೆ ಗ್ರಾ.ಪಂ. ಸದಸ್ಯನ ಪ್ರಯತ್ನ

11:09 PM May 05, 2019 | Team Udayavani |

ಕಟಪಾಡಿ : ರಾ.ಹೆ. 66ರ ಪಾಂಗಾಳ ಸೇತುವೆಯಡಿ ತ್ಯಾಜ್ಯದ ಕೊಂಪೆಯಾಗಿದ್ದು ಈ ಬಗ್ಗೆ ಉದಯವಾಣಿ ವರದಿ ಪ್ರಕಟಗೊಂಡ ತತ್‌ಕ್ಷಣ ಇನ್ನಂಜೆ ಗ್ರಾ.ಪಂ.ಸದಸ್ಯ ನಾಗೇಶ ಭಂಡಾರಿ ಅವರು ಇಬ್ಬರು ಕೂಲಿಯಾಳುಗಳನ್ನು ಬಳಸಿಕೊಂಡು ತ್ಯಾಜ್ಯ ವಿಲೇವಾರಿಗೆ ಯತ್ನಿಸಿದ್ದಾರೆ.

Advertisement

ತ್ಯಾಜ್ಯ ಅಪಾಯಕಾರಿಯಾಗಿರುವ ಬಗ್ಗೆ ವರದಿಯಲ್ಲಿ ಎಚ್ಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸದಸ್ಯ ಭಂಡಾರಿಯವರು ಸ್ವತಃ ಸ್ವತ್ಛತೆಗೆ ಇಳಿದಿರುವುದಾಗಿ ಹೇಳಿದ್ದಾರೆ. ಪಾಂಗಾಳ ಹೊಳೆಯು ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಭಾಗದಲ್ಲಿ ಹರಿಯುತ್ತಿದ್ದರೂ ಹೊಳೆಯ ನೀರು ಎಲ್ಲೆಡೆಯೂ ಹರಿಯುತ್ತದೆ. ಇಲ್ಲಿನ ತ್ಯಾಜ್ಯದ ಕೊಂಪೆಯ ಕೊಳೆತ ತ್ಯಾಜ್ಯಗಳ ಮೂಲಕ ಕೆಲ ಪರಿಸರಕ್ಕೆ ಮಾರಕ ಅಂಶಗಳು ಎಲ್ಲೆಡೆ ವ್ಯಾಪಿಸುವ ಸಾಧ್ಯತೆಯನ್ನು ಮನಗಂಡು ಸಾಧ್ಯವಾದಷ್ಟು ಸ್ವತ್ಛತೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next