Advertisement

ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ಪಾಟೀಲ

04:12 PM Apr 19, 2019 | Team Udayavani |

ನರಗುಂದ: ದೇಶದ ಜನರಲ್ಲಿ ದೇಶಾಭಿಮಾನ ಮೂಡಿಸುವ ಜೊತೆಗೆ ವಿಶ್ವದಲ್ಲೇ ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿ
ಅವರು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ ಮನವಿ ಮಾಡಿದರು.

Advertisement

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಪಟ್ಟಣದ ದಂಡಾಪುರ ಓಣಿಯಲ್ಲಿ ಚುನಾವಣಾ ಪ್ರಚಾರಾರ್ಥ ಪಾದಯಾತ್ರೆಯಲ್ಲಿ ತೆರಳಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಇಂದು ಜನರನ್ನು ಸ್ವಾಭಿಮಾನದ ಬದುಕಿನತ್ತ ಹೊರಳಿಸಿವೆ. ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನ ಸೇವಕರನ್ನಾಗಿ ಆಯ್ಕೆಗೊಳಿಸಲು ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಿ ಸಹಕರಿಸಬೇಕು ಎಂದರು.

ಪಟ್ಟಣದ ಜಮಲಾಪುರ, ದೇಸಾಯಿ ಗಲ್ಲಿ, ಲೋದಿಗಲ್ಲಿ, ಜವಳಿ ಬಜಾರ್‌, ತರಕಾರಿ ಮಾರುಕಟ್ಟೆ ಮುಂತಾದ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.

ಚಂದ್ರು ಪವಾರ, ಬಸು ಪಾಟೀಲ, ರವಿ ಹೊಂಗಲ, ನಾಗರಾಜ ಚಿತ್ರಗಾರ, ನಾಗೇಶ ಅಪೊ³àಜಿ, ಮಂಜು ಮೆಣಸಗಿ, ಪ್ರಕಾಶ ಪಟ್ಟಣಶೆಟ್ಟಿ, ಶಿವಾನಂದ ಮುತವಾಡ, ಚಂದ್ರಶೇಖರ ಕೋಟಿ, ಉಮೇಶ ಮೊರಬದ, ಎಲ್‌.ಎಂ. ಪಾಟೀಲ, ಅನಿಲ ಧರಿಯಣ್ಣವರ, ನಾಗರಾಜ ನೆಗಳೂರ, ಸಂತೋಷ ಹಂಚಿನಾಳ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next