Advertisement

ತಮ್ಮ ಸಂಬಳಕ್ಕೇ ತಡೆ ಒಡ್ಡಿಕೊಂಡ ಜಿಲ್ಲಾಧಿಕಾರಿ!

08:58 PM Dec 28, 2021 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಜಬಲ್ಪುರ ಜಿಲ್ಲಾಧಿಕಾರಿ ಕರಮವೀರ ಶರ್ಮಾ ತಮ್ಮ ಸಂಬಳವನ್ನು ತಡೆಹಿಡಿಯುವಂತೆ ತಾವೇ ಜಿಲ್ಲೆಯ ಖಜಾನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ!

Advertisement

ಮುಖ್ಯಮಂತ್ರಿ ಸಹಾಯವಾಣಿಗೆ ಬಂದ ದೂರುಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧವೇ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ ಕರಮವೀರ್‌ ಶರ್ಮಾ ಈ ಆದೇಶ ಹೊರ ಡಿ ಸಿದ್ದಾರೆ. ಸಾಕಷ್ಟು ದೂರುಗಳು 100 ದಿನಗಳಾದರೂ ಬಗೆಹರಿದಿಲ್ಲ.

ಹಾಗಾಗಿ ನನ್ನ ಹಾಗೂ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಡಿಸೆಂಬರ್‌ ತಿಂಗಳ ವೇತನ ತಡೆಹಿಡಿಯಿರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಕೇರಳ ಸಿಎಂಗೆ ದೂರು ನೀಡಲು ಹೊಸ ಟೋಲ್‌ಫ್ರೀ ನಂಬರ್‌

Advertisement

ಹಾಗೆಯೇ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುವಲ್ಲಿ ವಿಫ‌ಲವಾದ ಪುರಸಭೆಗಳ ಉಪ ಆಯುಕ್ತರ ಸಂಬಳಕ್ಕೂ ತಡೆ ನೀಡುವಂತೆ ಅವರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next