Advertisement
ನಗರದ ಬಿಎಲ್ಡಿಇ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಭವನದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಶಶಿಕಲಾ ಹುಡೇದ ಅವರ ಮೃಧ್ವಂಗಿ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, 12ನೇ ಶತಮಾನದ ಶರಣ ಚಳವಳಿ ಉಪ ಉತ್ಪನ್ನವಾದ ವಚನ ಸಾಹಿತ್ಯ ಸಮಾಜದ ಕಟ್ಟಕಡೆ ಸದಸ್ಯೆ ಎನಿಸಿದ್ದ ಸೂಳೆಗೂ ಸಮಾನ ಸ್ಥಾನ ನೀಡಿ, ವಚನಗಳನ್ನು ಸೃಷ್ಟಿಸುವ ಶಕ್ತಿ ರೂಪುಗೊಂಡುದು ಸಾರ್ವಕಾಲಿಕ ಶ್ರೇಷ್ಠ ಕ್ರಾಂತಿ ಎಂದು ಅಭಿಪ್ರಾಯಪಟ್ಟರು.
Related Articles
ರಚಿಸುವುದು ಕಷ್ಟ ಸಾಧ್ಯ. ತಮ್ಮ ಇಲಾಖೆ ಕರ್ತವ್ಯದ ಒತ್ತಡದ ಮಧ್ಯೆಯೂ ಶಶಿಕಲಾ ಅತ್ತುತ್ಯಮ ಕೃತಿ ರಚಿಸಿದ್ದಾರೆ. ಸ್ತ್ರೀ ಸಂವೇದನೆ ಬರಹಗಳ ಮೂಲಕ ತಮ್ಮನ್ನು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಅವರು, ಭಷವಿಷ್ಯದಲ್ಲೂ ಕಥೆ, ಕಾದಂಬರಿ ಸಾಹಿತ್ಯದ ಕಡೆಗೂ ಚಿತ್ತ ನೆಡಲಿ ಎಂದು ಆಶಿಸಿದರು.
Advertisement
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ಭೂಮಿಗೌಡ ಮಾತನಾಡಿ, ದಲಿತ ಕವಿ ಎಂದೇ ಕರೆಸಿಕೊಂಡಸಿದ್ದಲಿಂಗಯ್ಯ ಅವರು ಇಕ್ರಲಾ, ಒದಿರ್ಲಾ ಎಂದು ಬರೆದಾಗ ಇದು ಸಾಹಿತ್ಯವೇ ಎಂದು ಮೂಗು ಮುರಿದ, ಐಷಾರಾಮಿ ಸಾಹಿತಿಗಳು ವ್ಯಂಗ್ಯವಾಡಿದ್ದರು. ಆದರೆ ಈ ಶಬ್ದಗಳೇ ಹೊಸ ಪಥದ ಸಾಹಿತ್ಯ ರಚನೆಗೆ ಮುನ್ನುಡಿ ಬರೆದವು ಎಂಬುದು ಈಗ ಇತಿಹಾಸ ಎಂದು ಅಭಿಪ್ರಾಯಪಟ್ಟರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ| ಸುನಂದಮ್ಮ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಾನಪದ ಕವಿ ಸಿದ್ದಪ್ಪ ಬಿದರಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಪ್ಪಂದಿರ ದಿನಾಚರಣೆ ಸ್ಮರಣೆಗಾಗಿ ವಿವಿಧ ವೃತ್ತಿ ಜೀವನದಲ್ಲಿರುವ 6 ಜನ ಹುಡೇದ ಸಹೋದರಿಯರು ತಮ್ಮ ತಂದೆ ವಿ.ಜಿ. ಹುಡೇದ ಅವರನ್ನು ಸನ್ಮಾನಿಸಿದರು. ದ್ರಾಕ್ಷಾಯಿಣಿ ಬಿರಾದಾರ ಸ್ವಾಗತಿಸಿದರು. ದ್ರಾಕ್ಷಾಯಿಣಿ
ಹುಡೇದ ವಂದಿಸಿದರು.