Advertisement

ಕಾಲಿಗೆ ಬೀಳುವುದು ವಿಕೃತ ಸಂಸ್ಕೃತಿ: ಈಶ್ವರಪ್ಪ

03:45 AM Mar 09, 2017 | |

ಆನೇಕಲ್‌: ರಾಜಕೀಯ ನಾಯಕರ ಕಾಲಿಗೆ ಬೀಳುವುದು ತಪ್ಪು. ಇದೊಂದು ವಿಕೃತಿಯಾಗಿದೆ. ಇಂತಹ ಸಂಸ್ಕೃತಿ ಬಿಜೆಪಿಗೆ ಬರಬಾರದು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಿಗೆ ಗೌರವ ನೀಡುವುದಕ್ಕಾಗಿ ಕಾಲಿಗೆ ಬೀಳುವುದು ನಮ್ಮ ಸಂಸ್ಕೃತಿ. 

Advertisement

ಅದರೆ, ಅಧಿಕಾರಕ್ಕಾಗಿ ಹಾಗೂ ಎಂಎಲ್‌ಎ ಟಿಕೆಟ್‌ಗಾಗಿ ಕಾಲಿಗೆ ಬೀಳುವುದು ವಿಕೃತಿ. ಇದು ಸರಿಯಲ್ಲ ಎಂದರು. ಬುಧವಾರ ಬಿಜೆಪಿ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವುದ್ದನ್ನು  ಉಲ್ಲೇಖೀಸಿ ಪರೋಕ್ಷವಾಗಿ ಬಿಎಸ್‌ವೈಗೆ ಟಾಂಗ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next