Advertisement

ಸರಕಾರಿ ಅಧಿಕಾರಿ, ಸಿಬಂದಿಗೆ ನಿತ್ಯ ಆಹಾರ ಪೂರೈಕೆ

05:04 PM Apr 11, 2020 | sudhir |

ಕಾರ್ಕಳ: ಲಾಕ್‌ಡೌನ್‌ ಘೋಷಣೆ ಯಾದ ಬಳಿಕ ಕಾರ್ಕಳದ ಪಡುತಿರುಪತಿ ಕ್ರಿಕೆಟರ್ ತಂಡವು ಪೊಲೀಸರು, ಗೃಹ ರಕ್ಷಕ ದಳ, ಸರಕಾರಿ ಆಸ್ಪತ್ರೆ, ಕಂದಾಯ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಪುರಸಭಾ ನೌಕರರು ಹಾಗೂ ಪೌರಕಾರ್ಮಿಕರು, ತಾಲೂಕು ಕಚೇರಿ ಸಿಬಂದಿಗೆ ನಿತ್ಯ ಆಹಾರ ಪೂರೈಸುತ್ತಿದೆ.

Advertisement

ಇಲ್ಲಿನ ಉದಯವಾಣಿ ಪತ್ರಿಕೆ ವಿತರಕ ಗೋವಿಂದರಾಯ ಪೈ ಅವರ ಮನೆಯಲ್ಲಿ ಅಡುಗೆ ತಯಾರಿಸಿ, ವಿತರಣೆ ಮಾಡಲಾಗುತ್ತಿದೆ.
ಈ ಕಾರ್ಯದಲ್ಲಿ ಜೈನ್‌ ಗೇಮ್ಸ್‌ ಕ್ಲಬ್‌, ಜೈ ಹಿಂದ್‌ ಗೇಮ್ಸ್‌ ಕ್ಲಬ್‌ ಸದಸ್ಯರು, ದಾನಿಗಳೂ ಸಾಥ್‌ ನೀಡುತ್ತಿದ್ದಾರೆ.
ಈ ಮೂಲಕ ಸರಕಾರಿ ನೌಕರರ ಕಾರ್ಯ ನಿರ್ವಹಣೆಗೆ ನೆರವಾಗುವುದಕ್ಕೆ ತಹಶೀಲ್ದಾರ್‌ ಪುರಂದರ ಹೆಗ್ಡೆ ಮೆಚ್ಚುಗೆ ಸೂಚಿಸಿದ್ದಾರೆ.

ಮಾನವೀಯ ಕಾರ್ಯ
ಸರಕಾರಿ ನೌಕರರೊಂದಿಗೆ ನಿರ್ಗತಿಕರು, ಅಗತ್ಯವಿದ್ದವರಿಗೂ ಊಟ ನೀಡಲಾಗುತ್ತಿದೆ. 150 ಉಪಾಹಾರ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆ ರೋಗಿಗಳಿಗೆ ಊಟದೊಂದಿಗೆ ಹಣ್ಣೂ ನೀಡಲಾಗುತ್ತಿದೆ. ವಿವಿಧೆಡೆ ಸೇವೆ ಸಲ್ಲಿಸುತ್ತಿರುವವರಿಗೆ ಅನ್ನ ನೀಡುವ ಮೂಲಕ ಸಂಸ್ಥೆ ಮಾನವೀಯ ಕಾರ್ಯ ಮಾಡುತ್ತಿದೆ ಎಂದು ಕಾರ್ಕಳ ಡಿವೈಎಸ್‌ಪಿ ಭರತ್‌ ರೆಡ್ಡಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next