Advertisement

Rice: ಈ ತಿಂಗಳಿಂದಲೇ ಅಕ್ಕಿ ವಿತರಣೆಗೆ ಕ್ರಮ- ಆಹಾರ ಸಚಿವ ಮುನಿಯಪ್ಪ ಭರವಸೆ

11:20 PM Sep 30, 2023 | Team Udayavani |

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಕಳೆದ ಮೂರು ತಿಂಗಳಿಂದ ಅಕ್ಕಿಯ ಬದಲು ಹಣ ನೀಡುತ್ತಿದ್ದ ಸರಕಾರ, ಅಕ್ಟೋಬರ್‌ ತಿಂಗಳಿಂದ ಹಣದ ಬದಲು ಅಕ್ಕಿಯನ್ನೇ ನೀಡುವುದಾಗಿ ಹೇಳಿದೆ.

Advertisement

ಈ ಕುರಿತು ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ರಾಜ್ಯದಲ್ಲಿರುವ ಒಟ್ಟು 1.08 ಕೋಟಿ ಪಡಿತರ ಚೀಟಿಯ ಸುಮಾರು 4 ಕೋಟಿ ಫ‌ಲಾನುಭವಿಗಳ ಖಾತೆಗೆ ತಲಾ 170 ರೂ.ಗಳಂತೆ 600 ಕೋಟಿ ರೂ.ಗಳನ್ನು ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತಿದೆ ಎಂದರು.
ಅಕ್ಟೋಬರ್‌ ತಿಂಗಳಿಂದ ನಗದು ಪಾವತಿ ಬದಲು ಅಕ್ಕಿಯನ್ನೇ ಕೊಡಲು ತೀರ್ಮಾನಿಸಿದ್ದು, ಇದಕ್ಕಾಗಿ ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಲಭ್ಯವಿರುವ ಅಕ್ಕಿಯನ್ನು ಖರೀದಿಸುವ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದ್ದು, ಇದಕ್ಕೆ 5 ಕೆ.ಜಿ. ಸೇರಿಸಿ ಒಟ್ಟು 10 ಕೆ.ಜಿ. ನೀಡಲು ಹೆಚ್ಚುವರಿಯಾಗಿ 2.40 ಲಕ್ಷ ಟನ್‌ ಅಕ್ಕಿ ಬೇಕಾಗುತ್ತದೆ. ಹೀಗಾಗಿ ಅಕ್ಕಿ ಲಭ್ಯವಿರುವ ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಆಯಾ ಸರಕಾರಗಳಿಂದಲೇ ನೇರವಾಗಿ ಖರೀದಿಸುವ ಆಲೋಚನೆ ಇರುವುದರಿಂದ ಟೆಂಡರ್‌ ಪ್ರಕ್ರಿಯೆ ಅಗತ್ಯ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next