Advertisement

Panaji: ಸಂಚಾರ ನಿಯಮಗಳನ್ನು ಅನುಸರಿಸಿ,ಅಪಘಾತ ತಪ್ಪಿಸಿ: ಜಾಗೃತಿ ಜಾಥಾ

12:52 PM Feb 23, 2024 | Team Udayavani |

ಪಣಜಿ: ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಗೋವಾದ ಬಿಚೋಲಿ ಹಿರಿಯ ನಾಗರಿಕರು ಬಾಬಾ ಸಾವೈಕರ್ ಪ್ರತಿಷ್ಠಾನದ ಹಿರಿಯ ನಾಗರಿಕ ಸೇವಾ ಕೇಂದ್ರದ ನಾಗರಿಕರು ‘ಸಂಚಾರ ನಿಯಮಗಳನ್ನು ಅನುಸರಿಸಿ ಮತ್ತು ಅಪಘಾತಗಳನ್ನು ತಪ್ಪಿಸಿ’ ಎಂಬ ಸಂದೇಶದೊಂದಿಗೆ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು. ಈ ರ‍್ಯಾಲಿಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು.

Advertisement

ಬಿಚೋಳಿ ತಾಲೂಕು ಜ್ಯೇಷ್ಠ ಸಿಟಿಜನ್ ಮಂಚ್ ಸಹಯೋಗದಲ್ಲಿ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಚೌಕ್‍ನಿಂದ ರ‍್ಯಾಲಿ ಆರಂಭವಾಗಿದ್ದು, ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ಹಿರಿಯ ನಾಗರಿಕರು ಘೋಷಣೆಗಳನ್ನು ಕೂಗಿದರು.

ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ, ಸಂಚಾರಿ ನಿಯಮಗಳನ್ನು ಪಾಲಿಸಿ ಎಂಬಿತ್ಯಾದಿ ಸಂದೇಶಗಳನ್ನು ನೀಡುವ ಮೂಲಕ ನಗರವಾಸಿಗಳ ಗಮನ ಸೆಳೆದರು. ಬಳಿಕ ಮಾರುಕಟ್ಟೆಗೆ ಜಾಗೃತಿ ಮೂಡಿಸಿ ರ‍್ಯಾಲಿ ಮುಕ್ತಾಯಗೊಳಿಸಲಾಯಿತು.

ರ‍್ಯಾಲಿಯಲ್ಲಿ ಜ್ಯೇಷ್ಟ ನಗರ ಮಂಚ್‍ನ ಕಾಜಿತನ್ ವಾಜ್, ವೆಂಕಟೇಶ ನಾಟೇಕರ್ ಅವರೊಂದಿಗೆ ಮಾರುತಿ ಪಾಟೀಲ್, ರಾಜಾರಾಂ ಖೋಬರೇಕರ್, ಎಂ. ಕೃ. ಪಾಟೀಲ್, ವಿಜಯ್ ತೆಲಂಗ್, ಉಜ್ವಲಾ ಆಚಾರ್ಯ ಸೇರಿದಂತೆ ಹಿರಿಯ ನಾಗರಿಕರು ಭಾಗವಹಿಸಿದ್ದರು.

ಬಾಬಾ ಸಾವೈಕರ್ ಸೇವಾ ಪ್ರತಿಷ್ಠಾನದ ಟ್ರಸ್ಟಿ ರಮಾಕಾಂತ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ರ‍್ಯಾಲಿ ಆರಂಭವಾಯಿತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭೀಕರ ಅಪಘಾತದಲ್ಲಿ ಕೆಲವರು ಪ್ರಾಣ ಕಳೆದುಕೊಳ್ಳುವಂತಾಗುತ್ತಿದೆ ಎಂದು ಖಾಂತ್ ಶೆಟ್ಟಿ ಅಳಲು ತೋಡಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next