Advertisement

ಸಂಚಾರ ನಿಯಮ ಪಾಲಿಸಿ: ದೊಡ್ಡೇಗೌಡ

09:05 PM Jun 03, 2019 | Lakshmi GovindaRaj |

ಹುಣಸೂರು: ಸಾರಿಗೆ ಇಲಾಖೆ ನಿಯಮ ರೂಪಿಸಿದ್ದರೂ ಗೂಡ್ಸ್‌ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವುದು, ದಾಖಲಾತಿಗಳಿಲ್ಲದೆ ವಾಹನ ಚಲಾಯಿಸುವುದು ಅಪರಾಧವಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತೆಂದು ಗ್ರಾಮಾಂತರ ಠಾಣೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ದೊಡ್ಡೇಗೌಡ ಎಚ್ಚರಿಸಿದರು.

Advertisement

ತಾಲೂಕಿನ ಹನಗೋಡು ಗ್ರಾಮದ ಆಟೋ ನಿಲ್ದಾಣದಲ್ಲಿ ಗೂಡ್ಸ್‌ ಆಟೋ ಚಾಲಕರಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಾಲಕರು ಎಚ್ಚೆತ್ತುಕೊಳ್ಳಲಿ: ಇತ್ತೀಚೆಗೆ ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಕರನ್ನು ಹೊತ್ತೂಯ್ಯುವುದು ಹೆಚ್ಚಾಗಿದ್ದು ಅಪಘಾತದಲ್ಲಿ ಸಾವು ನೋವು ಸಂಭವಿಸುತ್ತಿದೆ. ವಾಹನಗಳ ತಪಾಸಣೆ ನಡೆಸಿದ ವೇಳೆ ಚಾಲನಾ ಪರವಾನಗಿ, ವಿಮೆ, ವಾಹನಗಳ ಮಾಲಿಕತ್ವದ ದಾಖಲಾತಿಗಳೇ ಇಲ್ಲದಿರುವ ವಾಹನಗಳು ಅಪಘಾತಕ್ಕೊಳಗಾಗುತ್ತಿದ್ದು, ಚಾಲಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಕಡ್ಡಾಯವಾಗಿ ಚಾಲನೆ ವಿಮೆ ಮಾಡಿಸಿ: ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಅಪಘಾತವಾದಲ್ಲಿ ಯಾವುದೇ ಪರಿಹಾರ ಪಡೆಯಲು ತೊಂದರೆಯಾಗಲಿದೆ ಎಂಬುದನ್ನು ಪ್ರಯಾಣಿಕರು ಅರಿಯಬೇಕು. ವಾಹನಗಳನ್ನು ತಪಾಸಣೆ ನಡೆಸುವ ವೇಳೆ ಪೊಲೀಸರೊಂದಿಗೆ ವಾಹನ ಚಾಲಕರು ಸಹಕರಿಸಬೇಕು, ಕಡ್ಡಾಯವಾಗಿ ವಿಮೆ, ಚಾಲನಾ ಪರವಾನಗಿ ಹೊಂದಿರಬೇಕೆಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next