Advertisement

ನಿಷೇಧಾಜ್ಞೆ ಪಾಲಿಸಿ: ಮಹಮದ್‌

04:46 PM Mar 24, 2020 | Suhan S |

ನಾಗಮಂಗಲ: ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತೀವ್ರವಾಗಿ ಹರಡುತ್ತಾ ಜನರನ್ನು ಆತಂಕ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ 144 ನೇ ಸೆಕ್ಷನ್‌ ಜಾರಿ ಆಗಿದೆ ಎಂದು ತಹಶೀಲ್ದಾರ್‌ ಮಹಮದ್‌ ತಿಳಿಸಿದರು.

Advertisement

ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇಂದಿನಿಂದ ಯಾವುದೇ ಕಾರಣಕ್ಕೂ 5 ಜನರಿಗಿಂತಾ ಹೆಚ್ಚಿನ ಜನ ಓಡಾಡಬಾರದು, ನಿಯಮ ಮೀರಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ, ನಮ್ಮೊಂದಿಗೆ ಕೈ ಜೋಡಿಸಿ, ಈ ಆದೇಶ ಜಿಲ್ಲಾಧಿಕಾರಿಗಳಿಂದ ಬಂದಿದ್ದು ಪಾಲನೆ ಮಾಡಿ ಎಂದರು.

ಸಾಮೂಹಿಕ ಕಾರ್ಯಕ್ರಮ, ಜಾತ್ರೆ, ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸಬಾರದು, ಅತ್ಯವಶ್ಯಕ ವಸ್ತು ಖರೀದಿಗೆ ಈ ನಿಯಮ ಅವಲಂಬಿಸುವುದಿಲ್ಲವೆಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ್‌ , ವೃತ್ತ ಆರಕ್ಷಕ ನಿರೀಕ್ಷಕ ರಾಜೇಂದ್ರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next